Advertisement

ಡಿಸೆಂಬರ್‌ ಒಳಗೆ ಭಾರತ-ಬಾಂಗ್ಲಾ ಗಡಿ ಬಂದ್‌ : ಸೋನೋವಾಲ್‌

03:31 PM May 25, 2018 | udayavani editorial |

ಗುವಾಹಟಿ : ಅಸ್ಸಾಂನಲ್ಲಿನ ಭಾರತ-ಬಾಂಗ್ಲಾದೇಶ ಗಡಿಯನ್ನು ಈ  ವರ್ಷ ಡಿಸೆಂಬರ್‌ ಒಳಗಾಗಿ ಸಂಪೂರ್ಣವಾಗಿ ಮುಚ್ಚಲಾಗುವುದು. ಇದಕ್ಕಾಗಿ ನದೀ ಭಾಗದ ಗಡಿಯನ್ನು ಮುಚ್ಚಲು ತಾಂತ್ರಿಕ ಪರಿಹಾರಗಳನ್ನು ಬಳಸಲಾಗುವುದು ಮತ್ತು ಭೂಪ್ರದೇಶದ ಗಡಿ ಭಾಗವನ್ನು ಮುಚ್ಚಲು ಸ್ಮಾರ್ಟ್‌ ಫೆನ್ಸಿಂಗ್‌ ಬಳಸಲಾಗುವುದು ಎಂದು ಮುಖ್ಯಮಂತ್ರಿ ಸೋನೋವಾಲ್‌ ಹೇಳಿದ್ದಾರೆ. 

Advertisement

ನಿನ್ನೆಯಷ್ಟೇ ಸಿಎಂ ಆಗಿ ಎರಡು ವರ್ಷಗಳ ಅವಧಿಯನ್ನು ಮುಗಿಸಿದ ಸೋನೋವಾಲ್‌ ಅವರು ಹೊರಗಿನವರು ಗಡಿ ನುಸುಳಿ ಒಳಬರುವುದನ್ನು ತಪ್ಪಿಸಲು  ಮತ್ತು ಕಳ್ಳಸಾಗಣೆಯನ್ನು ತಡೆಯಲು ಬಾಂಗ್ಲಾದೊಂದಿಗಿನ ಗಡಿಯನ್ನು ಮುಚ್ಚಲಾಗುವುದು ಎಂದು ಹೇಳಿದರು. 

ರಾಜ್ಯದ ಜನರಿಗೆ ಕೊಟ್ಟ ಭರವಸೆಯ ಪ್ರಕಾರ ಸರಕಾರ ಆರ್ಥಿಕ ಪ್ರಗತಿಯನ್ನು ಸಾಧಿಸಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಲಿದೆ; ಅಕ್ರಮ ವಲಸೆಯ ಪಿಡುಗಿನಿಂದ ರಾಜ್ಯವನ್ನು ಮುಕ್ತಮಾಡಲು ಶ್ರಮಿಸಲಿದೆ ಎಂದು ಸೋನೋವಾಲಾ ಮಾಧ್ಯಮದೊಂದಿಗೆ ಮಾತನಾಡುತ್ತಾ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next