Advertisement

ಉಗ್ರ ಶಿಬಿರ ನಾಶಗೊಳಿಸಿ: ಪಾಕ್‌ಗೆ ಭಾರತ ಆಗ್ರಹ

12:23 PM Feb 29, 2020 | Hari Prasad |

ಜಿನೇವಾ: ‘ಜಮ್ಮು ಮತ್ತು ಕಾಶ್ಮೀರದಲ್ಲಿನ ಸಕಾರಾತ್ಮಕ ಅಭಿವೃದ್ಧಿಯ ಹಳಿ ತಪ್ಪಿಸಲು ಯತ್ನಿಸುವ ಮುನ್ನ, ನೀವು ಮೊದಲು ಭಯೋತ್ಪಾದಕರಿಗೆ ಹಣಕಾಸು ನೆರವು ನೀಡುವುದನ್ನು ನಿಲ್ಲಿಸಿ ಮತ್ತು ನಿಮ್ಮ ನೆಲದಲ್ಲಿ ಕಾರ್ಯಾಚರಿಸುತ್ತಿರುವ ಉಗ್ರರ ಶಿಬಿರಗಳನ್ನು
ನಿರ್ಮೂಲನೆ ಮಾಡಿ.’ ಹೀಗೆಂದು ಪಾಕಿಸ್ಥಾನದ ನಾಯಕತ್ವಕ್ಕೆ ಖಡಕ್‌ ಮಾತುಗಳಿಂದ ಸವಾಲೆಸೆದಿದ್ದು ಭಾರತದ ರಾಜತಾಂತ್ರಿಕ ಅಧಿಕಾರಿ ವಿಮರ್ಶ್‌ ಆರ್ಯನ್‌.

Advertisement

ಕಣಿವೆ ರಾಜ್ಯದಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆ ಕುರಿತು ಪಾಕಿಸ್ಥಾನ ಎತ್ತಿದ ಪ್ರಶ್ನೆಗಳಿಗೆ ಉತ್ತರಿಸಿದ ಆರ್ಯನ್‌, ಉಗ್ರ ಸಂಘಟನೆಗಳ ನೆರವಿನಿಂದ ರಾಜ್ಯದ ಅಭಿವೃದ್ಧಿಯ ಹಳಿ ತಪ್ಪಿಸಲು ಪಾಕ್‌ ಸತತ ಪ್ರಯತ್ನ ಮಾಡುತ್ತಿರುವ ನಡುವೆಯೂ ಜಮ್ಮು-ಕಾಶ್ಮೀರದ ಪರಿಸ್ಥಿತಿಯು ವೇಗವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next