Advertisement

ಮಿತ್ರರಾಷ್ಟ್ರಗಳೊಂದಿಗೆ ಸೇರಿ ಶತ್ರುಗಳ ಹಿಮ್ಮೆಟ್ಟಿಸುತ್ತೇವೆ: ಜ.ರಾವತ್‌

10:59 AM Oct 19, 2019 | Team Udayavani |

ನವದೆಹಲಿ: ಭಾರತವು ನೆರೆ ದೇಶಗಳೊಂದಿಗೆ ಶಾಂತಿ ಮತ್ತು ಸುಸ್ಥಿರತೆಗೆ ಬದ್ಧವಾಗಿದ್ದು, ಮಿತ್ರ ರಾಷ್ಟ್ರಗಳೊಂದಿಗೆ ನಮ್ಮ ಪಾಲುದಾರಿಕೆಯನ್ನು ಮುಂದುವರಿಸುತ್ತೇವೆ ಎಂದು ಸೇನಾಪಡೆ ಮುಖ್ಯಸ್ಥ ಜ.ಬಿಪಿನ್‌ ರಾವತ್‌ ಹೇಳಿದ್ದಾರೆ. ಈ ಮೂಲಕ ಯಾವುದೇ ಸಂಭಾವ್ಯ ದಾಳಿಯನ್ನು ನಾವು ಎದುರಿಸುತ್ತೇವೆ ಎಂದು ಅವರು ಹೇಳಿದ್ದಾರೆ.

Advertisement

ಮೂರೂ ಸೇನಾಪಡೆಗಳನ್ನು ಒಳಗೊಂಡ ನಾಲ್ಕನೇ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅವರು, ವಿಶ್ವದಲ್ಲೇ ನಾವು ಪ್ರಮುಖ ಸೇನಾಶಕ್ತಿಯಾಗಿದ್ದೇವೆ. ಕೇವಲ ಗಾತ್ರದಲ್ಲಷ್ಟೇ ಅಲ್ಲ, ನಮ್ಮ ಸೇನಾ ಅನುಭವ ಮತ್ತು ವೃತ್ತಿಪರತೆಯೂ ವಿಶ್ವದಲ್ಲಿ ಹೆಸರಾಗಿದೆ ಎಂದಿದ್ದಾರೆ.

ಇದೇ ವೇಳೆ, ನೌಕಾಪಡೆ ಮುಖ್ಯ ಅಡ್ಮಿರಲ್‌ ಕರಮ್‌ಬೀರ್‌ ಸಿಂಗ್‌ ಮಾತನಾಡಿ, ಒಳನುಸುಳುವಿಕೆಯಂಥ ಕೃತ್ಯಗಳು ಗಂಭೀರ ಸಮಸ್ಯೆಗಳಾಗಿವೆ. ವಿಶ್ವ ಈ ನಿಟ್ಟಿನಲ್ಲಿ ಹೆಚ್ಚು ಸಹಕಾರದಿಂದ ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ಹಿಂದೂ ಮಹಾಸಾಗರ ಕರಾವಳಿಯನ್ನು ಹಂಚಿಕೊಂಡ ಸಮಾನ ಮನಸ್ಕ ದೇಶಗಳ ಜೊತೆ ಉತ್ತಮ ಸಂಬಂಧ ನಿರ್ಮಾಣ ಮತ್ತು ಸಹಕಾರವನ್ನು ಬಯಸಿದೆ ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next