Advertisement

Indi; ನಗ್ನ ರೂಪದ ದೇವಿಮೂರ್ತಿ ಕೂರಿಸಿ ಮಲಮೂತ್ರ ವಿಸರ್ಜಿಸಿ ವಿಕೃತಿ: ವ್ಯಾಪಕ ಆಕ್ರೋಶ

05:10 PM Oct 25, 2023 | Team Udayavani |

ಇಂಡಿ: ದೇವಿಮೂರ್ತಿಯನ್ನು ನಗ್ನ ಮಾಡಿದ ರೀತಿಯಲ್ಲಿ ಕೂರಿಸಿ, ಅಲ್ಲೇ ಮಲಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೆರೆದು ಧಾರ್ಮಿಕ ಭಾವನೆಗಳನ್ನು ಕೆರಳಿಸಿದ ಘಟನೆ ಇಂಡಿ ತಾಲ್ಲೂಕಿನ ಹಿರೇಬೇವನೂರ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.

Advertisement

ಕೃತ್ಯ ಎಸಗಿದ ಆರೋಪಿ ಶೌಕತಲಿ ನೈನಸಾಬ ಮಕಾಂದಾರ ಎಂಬ ಯುವಕನನ್ನು ಇಂಡಿ ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಆಕ್ರೋಶ
ಗೂಂಡಾ ಕಾಯ್ದೆ ಅಡಿ ಯುವಕನ ಮೇಲೆ ಪ್ರಕರಣ ದಾಖಲಿಸಬೇಕು.ಇಂತಹ ನೀಚ ಕೆಲಸ ಮಾಡಲು ಯಾರು ಪ್ರೇರೇಪಿಸಿದ್ದಾರೆ? ಈ ಕುರಿತು ತನಿಖೆ ನಡೆಸಬೇಕು. ಇಂತಹ ಧರ್ಮ ವಿರೋಧಿ ಕೆಲಸ ಮಾಡುವವರಿಗೆ ಕಾನೂನು ಅಡಿಯಲ್ಲಿ ಉಗ್ರ ಶಿಕ್ಷೆಗೆ ಒಳಪಡಿಸಬೇಕು ಎಂದು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು, ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟಿಸಿ ವ್ಯಾಪಕ ಆಕ್ರೋಶ ಹೊರ ಹಾಕಿದ್ದಾರೆ.

ವಿಶ್ವ ಹಿಂದೂ ಪರಿಷತ್, ಬಜರಂಗದಳದ ಜಿಲ್ಲಾ ಪ್ರಮುಖ ಪ್ರಕಾಶ ಬಿರಾದಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ತಹಶೀಲ್ದಾರ್ ಮತ್ತು ಸಿಪಿಐ ಅವರಿಗೆ ಮನವಿ ಸಲ್ಲಿಸಿದರು. ಶಂಕರ ಹಲವಾಯಿ, ಅಯ್ಯಪ್ಪಗೌಡ ಬಿರಾದಾರ, ಮಹೇಶ ಬೊಮ್ಮನಹಳ್ಳಿ, ಶಾಂತಪ್ಪ ಸೋಲಾಪೂರ, ಈರಣ್ಣ ಸಿಂದಗಿ, ಸುಭಾಶ ಪೂಜಾರಿ, ಪ್ರವಿಣ ಮಠ, ಶಶಿಕಾಂತ ಕೋಳೆಕರ, ಮಲ್ಲಿಕಾರ್ಜುನ ಪೂಜಾರಿ, ಮಳಸಿದ್ದ ಡಂಗಿ, ಬಾಬುಶಾ ಸೋಲಾಪೂರ, ಕಾರ್ತಿಗೌಡ ಪೋಲಿಸ ಪಾಟೀಲ, ಶಿವಾಜಿ ಜಾಧವ, ವಿಶ್ವನಾಥ ಪಾತಾಳೆ, ಮಂಜುನಾಥ ಜಮಾದಾರ, ರಮೇಶ ಬೊಮ್ಮನಹಳ್ಳಿ, ಅಕ್ಷಯ ಇಬಾರೆ, ಸಂಜೀವ ಜಾಧವ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next