Advertisement

IND vs ZIM T-20 Cricket: ಸತತ ಎರಡು ಪಂದ್ಯಗಳ ಗೆದ್ದು ಬೀಗಿದ ಭಾರತ

08:25 PM Jul 10, 2024 | Team Udayavani |

ಹರಾರೆ:  ಭಾರತ ಮತ್ತು ಜಿಂಬಾಬ್ವೆ ನಡುವಿನ ಮಹತ್ವದ ಮೂರನೇ ಪಂದ್ಯದಲ್ಲಿ 23 ರನ್‌ಗಳಿಂದ ಗೆಲುವು ದಾಖಲಿಸಿ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತವು 2-1ರಿಂದ ಮುನ್ನಡೆ ಸಾಧಿಸಿದೆ.

Advertisement

ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ನಾಯಕ ಶುಭ್​ಮನ್ ಗಿಲ್  ನೇತೃತ್ವದ ಭಾರತ ತಂಡ ನಿಗದಿತ 20 ಓವರ್‌ನಲ್ಲಿ 4 ವಿಕೆಟ್‌ ನಷ್ಟಕ್ಕೆ 182 ರನ್‌ಗಳ ಪೇರಿಸಿದರೆ, ಜಿಂಬಾಬ್ವೆ ತಂಡವು 20 ಓವರ್‌ನಲ್ಲಿ 6ವಿಕೆಟ್‌ ನಷ್ಟಕ್ಕೆ 159 ರನ್‌ಗಳಿಸಲಷ್ಟೇ ಶಕ್ತವಾಯಿತು.   ಗಿಲ್‌, ಜೈಸ್ವಾಲ್‌, ಗಾಯಕ್ವಾಡ್‌ ಭಾರತದ ಪರ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿ ಉತ್ತಮ ಮೊತ್ತ ಕಲೆಹಾಕಲು ನೆರವಾದರೆ,  ವೇಗದ ಬೌಲರ್‌ಗಳಾದ ಆವೇಶ್‌ ಖಾನ್‌ , ಖಲೀಲ್‌ ಅಹ್ಮದ್‌ ಬೌಲಿಂಗ್‌ನಲ್ಲಿ ಮಿಂಚಿದರು.

ಜಿಂಬಾಬ್ವೆಗೆ ಆರಂಭಿಕ ಆಘಾತ; ಬಳಿಕ ಉತ್ತಮ ಆಟ   

ಭಾರತ ನೀಡಿದ 182 ರನ್‌ಗಳ ಗುರಿಯ ಬೆನ್ನತ್ತಿದ ಜಿಂಬಾಬ್ವೆ ತಂಡವು ಬ್ಯಾಟಿಂಗ್‌ನಲ್ಲಿ ಆರಂಭಿಕ ಆಘಾತವನ್ನು ಎದುರಿಸಿತು. ಭಾರತೀಯ ಬೌಲರ್‌ಗಳ ಶಿಸ್ತಿನ ದಾಳಿಯಿಂದ 6 ಓವರ್‌ ಆಗುವ ವೇಳೆಗೆ ಜಿಂಬಾಬ್ವೆ ತಂಡವು 39 ರನ್‌ಗಳಿಸಿ ಪ್ರಮುಖ 5 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಆ ಬಳಿಕ ೬ನೇ ವಿಕೆಟ್‌ಗೆ ಜೊತೆಯಾದ ಡಿಯಾನ್‌ ಮೈಯರ್ಸ್‌ ಹಾಗೂ ವಿಕೆಟ್‌ ಕೀಪರ್‌ ಮದಾಂದೆ ಉತ್ತಮ ಜೊತೆಯಾಟ ಪ್ರದರ್ಶಿಸಿದರು.  26ಎಸೆತದಲ್ಲಿ37ರನ್‌ ಗಳಿಸಿದ್ದಾಗ ಔಟಾದರು.    ಮೈಯರ್ಸ್‌ ಏಕಾಂಗಿ ಹೋರಾಟ:  ಡಿಯಾನ್‌ ಮೈಯರ್ಸ್‌ ಭರ್ಜರಿ ಅರ್ಧಶತಕ ಗಳಿಸಿ ತಂಡ ಉತ್ತಮ ಮೊತ್ತಗಳಿಸುವಲ್ಲಿ ನೆರವಾದರು. ಏಳು ಬೌಂಡರಿ ಒಂದು ಸಿಕ್ಸರ್‌ ನೆರವಿನಿಂದ 49ಎಸೆತದಲ್ಲಿ65ರನ್‌ಗಳಿಸಿದರು.

ಗಿಲ್‌- ಜೈಸ್ವಾಲ್‌ “ಯಶಸ್ವಿ” ಆರಂಭ; ಗಿಲ್‌ ಅರ್ಧಶತಕ
ಆರಂಭಿಕರಾಗಿ ಕಣಕ್ಕಿಳಿದ ನಾಯಕ  ಶುಭ್‌ಮನ್‌ ಗಿಲ್‌ ಹಾಗೂ ಯಶಸ್ವಿ ಜೈಸ್ವಾಲ್‌ ಮೊದಲ ಓವರ್‌ನಿಂದಲೇ ಹೊಡಿ ಬಡಿ ಆಟಕ್ಕೆ ಮುಂದಡಿ ಇಟ್ಟರು.  ಗಿಲ್‌-ಜೈಸ್ವಾಲ್‌  ಜೋಡಿಯು ತಂಡದ ಮೊತ್ತವು ೮ ಓವರ್‌ನಲ್ಲಿ 67ರನ್‌ ಗಳಿಗೆ ತಲುಪಿದ್ದಾಗ ಜೈಸ್ವಾಲ್‌ ವಿಕೆಟ್‌ ಒಪ್ಪಿಸಿದರು. ಜೈಸ್ವಾಲ್‌ 27 ಎಸೆತದಲ್ಲಿ 36ಗಳಿಸಿದ್ದರು. ನಾಯಕ ಶುಭಮನ್‌ ಗಿಲ್‌ 7 ಬೌಂಡರಿ ಹಾಗೂ 3 ಸಿಕ್ಸರ್‌ಗಳ ಮೂಲಕ  49 ಎಸೆತದಲ್ಲಿ66 ರನ್‌ ಗಳಿಸಿ ಭರ್ಜರಿ ಬ್ಯಾಟಿಂಗ್‌  ಪ್ರದರ್ಶನ ನೀಡಿ ನಾಯಕನ ಆಟವಾಡಿದರು. ಕಳೆದ ಪಂದ್ಯದಲ್ಲಿ ವೇಗದ ಶತಕ ಬಾರಿಸಿದ್ದ ಅಭಿಷೇಕ್‌ ಶರ್ಮಾ 10 ರನ್‌ಗಳಿಸಿ ಬೇಗನೇ ವಿಕೆಟ್‌ ಒಪ್ಪಿಸಿದರು. ಎರಡನೇ ಟಿ-20 ಪಂದ್ಯದಲ್ಲಿ ಅರ್ಧಶತಕ ಗಳಿಸಿ ಮಿಂಚಿದ್ದ ಋತುರಾಜ್‌ ಗಾಯಕ್ವಾಡ್‌ ಈ ಪಂದ್ಯದಲ್ಲೂ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿ 28 ಎಸೆತಕ್ಕೆ 49 ರನ್‌ಗಳಿಸಿ ಅರ್ಧಶತಕದ ಗಡಿಯಂಚಿಗೆ ಬಂದಾಗ ಔಟಾಗಿ ನಿರಾಶೆ ಅನುಭವಿಸಿದರು.

Advertisement

ಎರಡು ತಂಡಗಳಲ್ಲೂ ಬದಲಾವಣೆ
ಮೂರನೇ ಟಿ20 ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ನಿರೀಕ್ಷೆಯಂತೆ  ಸಾಕಷ್ಟು ಬದಲಾವಣೆಗಳ ಮಾಡಿದ್ದು. ಟಿ20 ವಿಶ್ವಕಪ್ ವಿಜೇತ ತಂಡದ ಆಟಗಾರರು ಜಿಂಜಾಬ್ವೆಯಲ್ಲಿ ತಂಡವನ್ನು ಸೇರಿಕೊಂಡಿದ್ದು, ಅವರಿಗೆ ಅವಕಾಶ ನೀಡುವ ಸಲುವಾಗಿ ಭಾರತ ತಂಡದಲ್ಲಿ 4 ಬದಲಾವಣೆಗಳ ಮಾಡಲಾಗಿದೆ. ಅದರಂತೆ ಈ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್ ಮತ್ತು ಶಿವಂ ದುಬೆ ಕಣಕ್ಕೆ ಇಳಿದಿದ್ದರೆ, ಮುಖೇಶ್ ಕುಮಾರ್ ಬದಲಿಗೆ ಖಲೀಲ್ ಅಹ್ಮದ್​ಗೆ ಅವಕಾಶ ನೀಡಲಾಗಿತ್ತು.  ಕಳೆದೆರಡು ಪಂದ್ಯಗಳಲ್ಲಿ ವಿಕೆಟ್ ಕೀಪರ್‌ ಆಗಿದ್ದ ಧ್ರುವ್‌ ಜುರೇಲ್, ರಿಯಾನ್ ಪರಾಗ್, ಸಾಯಿ ಸುದರ್ಶನ್ ಈ ಪಂದ್ಯದಿಂದ ಹೊರಗುಳಿದಿದ್ದರು. ಅದೇ ಸಮಯದಲ್ಲಿ, ಜಿಂಬಾಬ್ವೆ ತಂಡವು ಕೂಡ ಎರಡು ಬದಲಾವಣೆಗಳೊಂದಿಗೆ ಮೈದಾನಕ್ಕಿಳಿದಿತ್ತು. ಐದು ಪಂದ್ಯಗಳ ಸರಣಿಯಲ್ಲಿ ಮೂರನೇ ಪಂದ್ಯ ಭಾರತ ಜಯ ಗಳಿಸುವ ಮೂಲಕ  ಸರಣಿಯಲ್ಲಿ ೨-೧ರಿಂದ ಮುನ್ನಡೆ ಸಾಧಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next