Advertisement

ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚುತ್ತಿದೆ ಬಿಸಿಲು, ಸೆಕೆ; ಬೆಂಕಿ ಅವಘಡ

11:42 PM Apr 17, 2020 | Sriram |

ವಿಶೇಷ ವರದಿ-ಮಂಗಳೂರು / ಸುಳ್ಯ: ಅಬ್ಬಬ್ಟಾ… ಎಂಥಾ ಸೆಕೆ ಮಾರಾಯ್ರೆ! ಇದು ಕರಾವಳಿ ಜಿಲ್ಲೆಗಳಲ್ಲಿ ಕೆಲವು ದಿನಗಳಿಂದ ಎಲ್ಲರ ಬಾಯಿಯಿಂದ ಕೇಳಿ ಬರುತ್ತಿರುವ ಮಾತು.

Advertisement

ಇದರ ಜತೆಗೇ ಅರಣ್ಯ, ರಬ್ಬರ್‌ ತೋಟಗಳಲ್ಲಿ ಬೆಂಕಿ ಅವಘಡ ಪ್ರಕರಣಗಳು ಹೆಚ್ಚಾಗುತ್ತಿವೆ. ವಿದ್ಯುತ್‌ ಸಹಿತ ಹಲವು ಕಾರಣಗಳಿಂದ ಬೆಂಕಿ ಕಿಡಿ ಹಸುರು ಸಂಪತ್ತನ್ನು ದಹಿಸುತ್ತಿದೆ.

ಹಲವು ಪ್ರಕರಣ
ಸುಳ್ಯ ತಾಲೂಕಿನ ಹತ್ತಕ್ಕೂ ಅಧಿಕ ಕಡೆಗಳಲ್ಲಿ ಈಗಾಗಲೇ ಬೆಂಕಿ ಅವಘಡ ಸಂಭವಿಸಿದೆ. ಅರಂತೋಡು ಭಾಗದಲ್ಲಿ ಅರಣ್ಯ ಪ್ರದೇಶ, ಕನಕಮಜಲು, ಐವರ್ನಾಡು, ಪೆರುವಾಜೆ ಮೊದಲಾದೆಡೆ ರಬ್ಬರ್‌, ಗೇರು ತೋಟಗಳು ಬೆಂಕಿಗೆ ಆಹುತಿ ಆಗಿವೆ.

ಹೆಚ್ಚಿನ ಸಂದರ್ಭಗಳಲ್ಲಿ ಬೀಡಿ, ಸಿಗರೇಟ್‌ ಸೇದಿ ಎಲ್ಲೆಂದರಲ್ಲಿ ಎಸೆಯುವುದೇ ಮೊದಲಾದ ಮನುಷ್ಯನ ನಿರ್ಲಕ್ಷ್ಯ ಬೆಂಕಿ ಅವಘಡಕ್ಕೆ ಕಾರಣವಾಗುತ್ತದೆ. ಕೆಲವು ಬಾರಿ ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ಗಳಿಂದ ಸಿಡಿಯುವ ಬೆಂಕಿ ಕಿಡಿ ಅಥವಾ ವಿದ್ಯುತ್‌ ತಂತಿಗಳು ಬೆಸೆದು ಸೃಷ್ಟಿಯಾಗುವ ಕಿಡಿಯಿಂದ ಕೃಷಿ ಮತ್ತು ಅರಣ್ಯ ಪ್ರದೇಶ ಆಹುತಿಯಾಗುವುದೂ ಇದೆ. ಆದರೆ ಟ್ರಾನ್ಸ್‌ಫಾರ್ಮರ್‌ಗಳಿಂದ ಕಿಡಿ ಹಬ್ಬಿರುವ ಯಾವುದೇ ಲಕ್ಷಣ ಕಂಡು ಬರುತ್ತಿಲ್ಲ ಎನ್ನುತ್ತಾರೆ ಸುಳ್ಯ ಮೆಸ್ಕಾಂ ಎಇ ಹರೀಶ್‌ ಅವರು.

ಈ ಬಾರಿ ಅರಣ್ಯ ಪ್ರದೇಶದಲ್ಲಿ ಅಗ್ನಿ ಅವಘಡದ ಒಂದು ಪ್ರಕರಣ ಕಂಡುಬಂದಿದ್ದು, ಅದನ್ನು ತತ್‌ಕ್ಷಣ ತಹಬದಿಗೆ ತಂದಿದ್ದೇವೆ ಎನ್ನುತ್ತಾರೆ ಸುಳ್ಯ ವಲಯ ಅರಣ್ಯಧಿಕಾರಿ ಮಂಜುನಾಥ ಎನ್‌.

Advertisement

ಬೆಂಕಿ ರೇಖೆ
ಅರಣ್ಯದಲ್ಲಿ ಅಲ್ಲಲ್ಲಿ ಬೆಂಕಿ ರೇಖೆಗಳನ್ನು ನಿರ್ಮಿಸುವುದರಿಂದ ಕಾಳಿYಚ್ಚು ವ್ಯಾಪಿಸುವುದನ್ನು ತಡೆಯಬಹುದು. ಪದೇ- ಪದೇ ಇದರ ಪರಿಶೀಲನೆ ಅಗತ್ಯ ಇದೆ. ತರೆಗೆಲೆಗಳು ಬೆಂಕಿ ರೇಖೆಯನ್ನು ಮುಚ್ಚುವುದರಿಂದ ಬೆಂಕಿ ಹರಡಲು ಕಾರಣವಾಗಬಹುದು.

ಈಗ ಲಾಕ್‌ಡೌನ್‌ ಪರಿಶೀಲನೆಗೆ ಅಡ್ಡಿ ಆಗುತ್ತಿದೆ ಎನ್ನುತ್ತಾರೆ ಕಾಡಿನ ಸನಿಹದ ನಿವಾಸಿಗಳು.ವಿದ್ಯುತ್‌ ತಂತಿ, ಟ್ರಾನ್ಸ್‌ಫಾರ್ಮರ್‌ ಅಳವಡಿಸಿರುವಲ್ಲಿ ಅಪಾಯ ಹೆಚ್ಚು. ಅಲ್ಲಿರುವ ಒಣ ಗಿಡ, ಮರ, ಎಲೆಗಳನ್ನು ತೆರವು ಮಾಡಬೇಕು. ಆ ಕಾರ್ಯವನ್ನು ಯಾರು ಮಾಡಬೇಕು ಎಂಬ ಗೊಂದಲ ಇದೆ. ಮೆಸ್ಕಾಂಗೆ ನಿತ್ಯವೂ ಅದನ್ನು ಗಮನಿಸಲು ಅಸಾಧ್ಯವಾಗಿರುವ ಕಾರಣ ಸ್ಥಳೀಯಾಡಳಿತ ನಿಗಾ ಇರಿಸಬೇಕಿದೆ.

ಬಿಸಿ ಹೆಚ್ಚಿಸಿದ ಲಾಕ್‌ಡೌನ್‌
ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ ಮನೆಯೊಳಗಡೆಯೇ ಇರುವುದು ಜನರಿಗೆ ಅನಿವಾರ್ಯವಾಗಿದೆ. ಕಚೇರಿಗಳಲ್ಲಿ, ಕೆಲವು ಮನೆಗಳಲ್ಲಿ ಹವಾನಿಯಂತ್ರಣ ವ್ಯವಸ್ಥೆ ಇದ್ದರೂ ಕೋವಿಡ್ 19 ಮುನ್ನೆಚ್ಚರಿಕೆಯಾಗಿ ಅದನ್ನು ಬಳಸುತ್ತಿಲ್ಲ. ತಂಪು ಪಾನೀಯಗಳ ಮಳಿಗೆಗಳು, ಕ್ರೀಂ ಪಾರ್ಲರ್‌ಗಳು ಬಂದ್‌ ಆಗಿರುವುದರಿಂದ ಹಣ್ಣುಗಳನ್ನು ಮನೆಗೊಯ್ದು ಹಾಗೆಯೇ ಅಥವಾ ಜ್ಯೂಸ್‌ ತಯಾರಿಸಿ ಕುಡಿದು ಹೊಟ್ಟೆಯನ್ನು ತಣ್ಣಗಾಗಿಸಿ ಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ನಗರಗಳಲ್ಲಿ ಡೋರ್‌ ಡೆಲಿವರಿ ಇರುವುದರಿಂದ ಕೆಲವರು ತಂಪು ಪಾನೀಯ, ಜ್ಯೂಸ್‌, ಐಸ್‌ಕ್ರೀಂಗಳನ್ನು ಮನೆಗೇ ತರಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಕಲ್ಲಂಗಡಿ, ಕಬೂìಜ, ದಾಳಿಂಬೆ, ದ್ರಾಕ್ಷಿ, ಸೇಬು, ಬಾಳೆ ಹಣ್ಣುಗಳಿಗೆ ಬೇಡಿಕೆ ಹೆಚ್ಚಾಗಿದೆ.

ಅಲ್ಪಸ್ವಲ್ಪ ಮಳೆಯಿಂದ
ಸೆಕೆ ಹೆಚ್ಚಳ
ಕರಾವಳಿಯ ಕೆಲವೆಡೆ ಇತ್ತೀಚೆಗೆ ಅಲ್ಪಸ್ವಲ್ಪ ಮಳೆ ಬರುತ್ತಿರುವುದೂ ಸೆಕೆ ಹೆಚ್ಚಾಗಲು ಕಾರಣ. ಮಂಗಳೂರಿನಲ್ಲಿ ಗುರುವಾರ ಗರಿಷ್ಠ ಉಷ್ಣಾಂಶ 36ರಿಂದ 37 ಡಿಗ್ರಿ ಸೆಲ್ಸಿಯಸ್‌ ಇತ್ತು. 3-4 ದಿನಗಳಿಂದ ಇದೇ ಮಟ್ಟದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next