Advertisement

Cauvery: ತಮಿಳುನಾಡಿಗೆ ಹೆಚ್ಚಿದ ನೀರಿನ ಹರಿವು

10:52 PM Sep 25, 2023 | Team Udayavani |

ಮಂಡ್ಯ: ಕಾವೇರಿ ನೀರು ನಿರ್ವಹಣ ಪ್ರಾಧಿಕಾರ ಹಾಗೂ ಸುಪ್ರೀಂಕೋರ್ಟ್‌ ಆದೇಶದ ಬಳಿಕ ತಮಿಳುನಾಡಿಗೆ ಬಿಡುತ್ತಿರುವ ನೀರಿನ ಪ್ರಮಾಣ ಹೆಚ್ಚಿದೆ. ಶನಿವಾರ ಕೆಆರ್‌ಎಸ್‌ ಜಲಾಶಯದಿಂದ ನದಿಗೆ 2,973 ಕ್ಯುಸೆಕ್‌ ನೀರು ಬಿಡುಗಡೆ ಮಾಡಲಾಗಿತ್ತು. ರವಿವಾರ 3,838 ಕ್ಯುಸೆಕ್‌ ನೀಡು ಬಿಡಲಾಗಿತ್ತು. ಸೋಮವಾರ 4,105 ಕ್ಯುಸೆಕ್‌ ನೀರು ಬಿಡಲಾಗಿದೆ.ಮತ್ತೂಂದೆಡೆ ಮೈಸೂರಿನ ಕಬಿನಿ ಜಲಾಶಯದಿಂದಲೂ ಸೋಮವಾರ ತಮಿಳುನಾಡಿಗೆ 2,500 ಕ್ಯುಸೆಕ್‌ನಷ್ಟು ನೀರು ಬಿಡುಗಡೆ ಮಾಡಲಾಗಿದೆ.

Advertisement

ಪ್ರಸ್ತುತ ಕೆಆರ್‌ಎಸ್‌ ಜಲಾ ಶಯದಲ್ಲಿ 20.334 ಟಿಎಂಸಿ ನೀರು ಸಂಗ್ರಹವಿದೆ. 124.80 ಗರಿಷ್ಠ ಮಟ್ಟದ ಜಲಾಶಯದಲ್ಲಿ 96.70 ಅಡಿ ನೀರು ನೀರಿದ್ದು, ಒಳಹರಿವು 5,993 ಕ್ಯುಸೆಕ್‌ ಇದೆ. ನಾಲೆಗೆ 2,611 ಕ್ಯುಸೆಕ್‌ ಬಿಡಲಾಗಿದೆ. ಒಟ್ಟು ಹೊರಹರಿವು 6,716 ಕ್ಯುಸೆಕ್‌ ಇದೆ.

Advertisement

Udayavani is now on Telegram. Click here to join our channel and stay updated with the latest news.

Next