Advertisement

Davanagere ಸಿರಿಗೆರೆ-ಸಾಣೇಹಳ್ಳಿ ಸ್ವಾಮೀಜಿಗಳ ಪೀಠತ್ಯಾಗಕ್ಕೆ ಹೆಚ್ಚಿದ ಕೂಗು

09:58 PM Aug 04, 2024 | Team Udayavani |

ದಾವಣಗೆರೆ: ಸಿರಿಗೆರೆ ಮತ್ತು ಸಾಣೇಹಳ್ಳಿ ಸ್ವಾಮೀಜಿಗಳು ಪೀಠದಿಂದ ನಿವೃತ್ತಿ ಜತೆಗೆ ಉತ್ತರಾಧಿಕಾರಿ ಅಥವಾ ಮರಿ ಸ್ವಾಮೀಜಿ ಘೋಷಣೆ ಮಾಡಬೇಕು ಎಂದು ಭಾನುವಾರ ದಾವಣಗೆರೆ ಹೊರ ವಲಯದಲ್ಲಿ ಭಾನುವಾರ ನಡೆದ “ತರಳಬಾಳು ಪೀಠ ಅಂದು-ಇಂದು-ಮುಂದು’ ವಿಷಯವಾಗಿ ನಡೆದ ಶ್ರೀಮಠದ ಸದ್ಭಕ್ತರ ಸಮಾಲೋಚನಾ ಸಭೆ ಒತ್ತಾಯಿಸಿದೆ.

Advertisement

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆದ ಶಾಸಕ ಶಾಮನೂರು ಶಿವಶಂಕರಪ್ಪ, ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಪ್ರಕಾಶ ಸ್ವಾಮೀಜಿ ಎಲ್ಲರೂ ಪೀಠ ತ್ಯಾಗ ಮಾಡಲಿ. ಉತ್ತರಾಧಿಕಾರಿ ಇಲ್ಲವೇ ಮರಿ ಸ್ವಾಮೀಜಿಗಳ ಘೋಷಣೆ ಮಾಡಲಿ. ಬೆಂಗಳೂರಿನಲ್ಲಿ ನಡೆಯುವ ಸಭೆಯಲ್ಲಿ ಎಲ್ಲವೂ ಸರಿಯಾಗದಿದ್ದರೆ ಮುಂದಿನ ನಿರ್ಧಾರದ ಬಗ್ಗೆ ಎಲ್ಲರೂ ಸೇರಿ ಚರ್ಚೆ ಮಾಡೋಣ ಎಂದರು.

ಮಾಜಿ ಸಚಿವ ಬಿ.ಸಿ.ಪಾಟೀಲ್‌ ಮಾತನಾಡಿ, ಸ್ವಾಮೀಜಿಗಳು ಯಾರೊಬ್ಬರ ಗಮನಕ್ಕೂ ತರದೆ 1990ರಲ್ಲಿ ಏಕವ್ಯಕ್ತಿ ಡೀಡ್‌ ಮಾಡಿಕೊಂಡಿರುವುದು ಸರಿಯಲ್ಲ ಎಂದರು.

ಹರಿಹರ ಶಾಸಕ ಬಿ.ಪಿ.ಹರೀಶ್‌, ಮಾಜಿ ಶಾಸಕರಾದ ಎಸ್‌.ಎ.ರವೀಂದ್ರನಾಥ್‌, ವಡ್ನಾಳ್‌ ರಾಜಣ್ಣ, ಟಿ.ಗುರುಸಿದ್ದನಗೌಡ, ರುದ್ರೇಗೌಡ, ಅಣಬೇರು ರಾಜಣ್ಣ, ಮಾಡಾಳ್‌ ಮಲ್ಲಿಕಾರ್ಜುನ್‌, ಜೆ.ಆರ್‌.ಷಣ್ಮುಖಪ್ಪ ಅನೇಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next