Advertisement

ಸೋಂಕು ಹೆಚ್ಚಳ: ಮುಕ್ತ ಕೋರ್ಟ್‌ ಕಲಾಪ ರದ್ದು

06:36 AM Jul 01, 2020 | Lakshmi GovindaRaj |

ಬೆಂಗಳೂರು: ನಗರದಲ್ಲಿ ಕೋವಿಡ್‌ 19 ಪ್ರಕರಣಗಳು ದಿನೇ‌ ದಿನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಕೀಲರು ಹಾಗೂ ಕೋರ್ಟ್‌ ಸಿಬ್ಬಂದಿಯ ಸುರಕ್ಷತೆಯ ಹಿತದೃಷ್ಟಿಯಿಂದ ಹೈಕೋರ್ಟ್‌ನ ಬೆಂಗಳೂರು ಪ್ರಧಾನ ಪೀಠದಲ್ಲಿ ಫಿಸಿಕಲ್‌ (ಮುಕ್ತ ನ್ಯಾಯಾಲಯ) ಕಲಾಪಗಳನ್ನು ರದ್ದುಪಡಿಸಲಾಗಿದೆ.

Advertisement

ಮುಖ್ಯ ನ್ಯಾ. ಎ.ಎಸ್‌.ಓಕ್‌ ಅವರ ಸೂಚನೆ ಮೇರೆಗೆ ನೋಟಿಸ್‌ ಜಾರಿಯಾಗಿದ್ದು, ಮುಂದಿನ ಆದೇಶದವರೆಗೆ ಫಿಸಿಕಲ್‌ ಕಲಾಪ ರದ್ದುಪಡಿಸಿರುವ ಹೈಕೋರ್ಟ್‌, ತುರ್ತು ಪ್ರಕರಣಗಳನ್ನು ವಿಡಿಯೋ ಕಾನ್ಫರೆನ್ಸ್  ಮೂಲಕ ಮಾತ್ರ  ವಿಚಾರಣೆ ನಡೆಸಲಾಗುವುದು. ಕೋವಿಡ್‌-19 ಹಿನ್ನೆಲೆಯಲ್ಲಿ ಜನರಿಗೆ ಉಂಟಾದ ಸಮಸ್ಯೆಗಳ ಬಗ್ಗೆ ಸಲ್ಲಿಕೆಯಾಗಿದ್ದ ವಿವಿಧ ಹಿತಾಸಕ್ತಿ ಅರ್ಜಿಗಳನ್ನು ಇನ್ನು ಮುಂದೆ ಮುಖ್ಯ ನ್ಯಾ.  ಎ.ಎಸ್‌.ಓಕ್‌ ಮತ್ತು ನ್ಯಾ. ಅರವಿಂದ ಕುಮಾರ್‌ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಲಿದೆ ಎಂದು ತಿಳಿಸಲಾಗಿದೆ.

ಹೈಕೋರ್ಟ್‌ ಸಂಕೀರ್ಣ ಸ್ಯಾನಿಟೈಸ್‌: ಬೆಂಗಳೂರಿನಲ್ಲಿ ಕೋವಿಡ್‌ 19 ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಗರ ಹೈಕೋರ್ಟ್‌ನ ಇಡೀ ಸಂಕೀರ್ಣವನ್ನು ಮಂಗಳವಾರ ಸ್ಯಾನಿಟೈಸ್‌ ಮಾಡಲಾಯಿತು.  ಸ್ಯಾನಿಟೈಸ್‌ ಮಾಡಬೇಕಿದ್ದ ಕಾರಣ ಮಂಗಳವಾರದ ಕಲಾಪಗಳನ್ನು ರದ್ದುಪಡಿಸಲಾಗಿತ್ತು. ಮಂಗಳವಾರ ನಿಗದಿಯಾಗಿದ್ದ ತುರ್ತು ಪ್ರಕರಣಗಳನ್ನು ಮುಂದಿನ ದಿನಗಳಲ್ಲಿ ವೀಡಿಯೋ ಕಾನ್ಫರೆನ್ಸ್‌ ಮೂಲಕ ವಿಚಾರಣೆ  ಮಾಡಲಾಗುತ್ತದೆ ಎಂದು ನೋಟಿಸ್‌ ನಲ್ಲಿ ರಿಜಿಸ್ಟ್ರಾರ್‌ ಜನರಲ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next