Advertisement

ಕೆಆರ್‌ಎಸ್‌ ಒಳ ಹರಿವು ಹೆಚ್ಚಳ: ರೈತರ ಮೊಗದಲ್ಲಿ ಸಂತಸ

06:45 AM May 29, 2018 | |

ಶ್ರೀರಂಗಪಟ್ಟಣ: ಕಾವೇರಿ ಕಣಿವೆ ಪ್ರದೇಶದಲ್ಲಿ ಸತತ ಮಳೆ ಬಿದ್ದ ಪರಿಣಾಮ ಕೆಆರ್‌ಎಸ್‌ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದ್ದು ಇದರಿಂದ ರೈತರ ಮೊಗದಲ್ಲಿ ಮೂಡಿಸಿದೆ. ಕಾವೇರಿ ನದಿ ಮೂಲಕ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಹೆಚ್ಚಾಗುತ್ತಿದೆ. ಕಳೆದ ವಾರದ ಹಿಂದೆಯಷ್ಟೇ 68 ಅಡಿಗೆ ಕುಸಿದಿದ್ದ ಜಲಾಶಯದಲ್ಲಿ ಒಳ ಹರಿವಿನ ಪ್ರಮಾಣವೂ ಅಷ್ಟೇ  ಕಡಿಮೆ ಇತ್ತು.

Advertisement

ಜಲಾಶಯದ ಗರಿಷ್ಟ ಮಟ್ಟ 124.80 ಅಡಿಗಳಿದ್ದು ಪ್ರಸ್ತುತ ಜಲಾಶಯದಲ್ಲಿ 74 ಅಡಿ ನೀರು ಏರಿಕೆಯಾಗಿದೆ. ಈಗ ಜಲಾಶಯದ ಒಳ ಹರಿವು 3450 ಕ್ಯುಸೆಕ್‌ ಇದ್ದು ಹೊರಹರಿವು 348 ಕ್ಯುಸೆಕ್‌ ಆಗಿದೆ. ಜಲಾಶಯದಲ್ಲಿ ಲಭ್ಯವಿರುವ ನೀರಿನ ಪ್ರಮಾಣ 8.057 ಟಿಎಂಸಿ ಇದೆ.ಕೊಡಗು ಪ್ರದೇಶದಲ್ಲಿ ಉತ್ತಮ ಮಳೆ ಬೀಳಲಾರಂಭಿಸಿದ್ದು ದಿಢೀರನೆ 3 ಸಾವಿರ ಕ್ಯುಸೆಕ್‌ ನೀರು ಜಲಾಶಯಕ್ಕೆ  ಹರಿದು ಬರುತ್ತಿದೆ. ಇದೇ ರೀತಿ ಮಂಡ್ಯ ಜಿಲ್ಲೆಯಲ್ಲೂ ಉತ್ತಮ ಮಳೆಯಾಗುತ್ತಿದ್ದು ರೈತರು ಭತ್ತದ ಕಟಾವು ಕಾರ್ಯ ನಡೆಸಲು ತೊಂದರೆಯಾಗುತ್ತಿದೆ.

ಕೊಡಗು ಕೇರಳ ಭಾಗಗಳ ಪ್ರದೇಶದಲ್ಲಿ ಉತ್ತಮ ಮಳೆ ಬಿದ್ದರೆ ಕೆಆರ್‌ಎಸ್‌ ಜಲಾಶಯದ ಮೇಲ್ಭಾಗದ ನದಿಗಳಾದ ಹೇಮಾವತಿ ಹಾಗೂ ಲಕ್ಷ್ಮಣ ತೀರ್ಥ ನದಿಗಳ ಮೂಲಕ ಒಳ ಹರಿವು ಪ್ರಮಾಣ ಹೆಚ್ಚಾಗಿ ಕೆಆರ್‌ಎಸ್‌ ಜಲಾಶಯಕ್ಕೆ ಹರಿದು ಬರುತ್ತದೆ. ಈ ಮೂಲಕ ಒಳ ಹರಿವಿನ ಪ್ರಮಾಣವೂ ಹೆಚ್ಚಾಗಿ ಜಲಾಶಯ ಈ ಬಾರಿ ತುಂಬುವುದರಲ್ಲಿ ಸಂಶಯವಿಲ್ಲ. ಇದರಿಂದ ಕೆಆರ್‌ಎಸ್‌ ಜಲಾಶಯದ ಕೆಳಭಾಗ ರೈತರಲ್ಲಿ ಮತ್ತೂಂದು ಬೆಳೆ ಬೆಳೆಯಲು ನೀರು ದೊರಕುತ್ತದೆ ಎಂಬ ಆಶಾಭಾವನೆ ಮೂಡುವುದರಲ್ಲಿ ಯಾವುದೇ ಸಂಶಯ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next