Advertisement

ಕ್ರೀಡೆಯಿಂದ ಆತ್ಮವಿಶ್ವಾಸ ವೃದ್ಧಿ

12:29 PM Dec 15, 2018 | Team Udayavani |

ಕೆಂಗೇರಿ: ವಿದ್ಯಾರ್ಥಿಗಳು ನಿತ್ಯ ಜೀವನದಲ್ಲಿ ಕ್ರೀಡೆಗೆ ಆದ್ಯತೆ ನೀಡಿದರೆ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದು ಖ್ಯಾತ ಟ್ರಯಾಥ್ಲಾನ್‌ ಕ್ರೀಡಾಪಟು ಜಿ.ಆರ್‌.ಕೀರ್ತಿಕುಮಾರ್‌ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

Advertisement

ಮೈಸೂರು ರಸ್ತೆಯ ಗುರುಕುಲ ಇಂಟರ್‌ನ್ಯಾಷನಲ್‌ ಶಾಲೆಯ ಪ್ರಥಮ ವರ್ಷದ 3 ದಿನಗಳ ಗುರುಕುಲ ಒಲಿಂಪಿಕ್‌ ಕ್ರೀಡಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಬಾಲ್ಯದಲ್ಲೇ ತಮಗೆ ಇಷ್ಟವಾದ ಕ್ರೀಡೆ ಅಯ್ಕೆ ಮಾಡಿಕೂಂಡು ಅದರಲ್ಲಿ ಪರಿಣತಿ ಪಡೆದು, ಶಾಲೆ, ದೇಶಕ್ಕೆ ಕೀರ್ತಿ ತರಬೇಕು ಎಂದರು.

ಗುರುಕುಲ ಸಂಸ್ಥೆಯ ಸತ್ಸಂಗ್‌ ಪ್ರಿಯದಾಸ್‌ ಸ್ವಾಮೀಜಿ ಮಾತನಾಡಿ, ಬಾಲ್ಯದಿಂದಲೇ ಸ್ವಯಂ ನಿರ್ಣಯ ತೆಗೆದುಕೂಳ್ಳಲು ಹಾಗೂ ಉತ್ತಮ ಮನೋಭಾವ ಬೆಳೆಸಿಕೊಳ್ಳಲು ನೆರವಾಗುವ ಕ್ರೀಡೆಗಳು, ವಿದ್ಯಾರ್ಥಿಗಳು ಜೀವನ ರೂಪಿಸಿಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗುರುಕುಲ ಶಾಲೆ ಮುಖ್ಯ ನಿರ್ವಾಹಕರಾದ ಕೃಷ್ಣಚರಣ ದಾಸ್‌ ಸ್ವಾಮೀಜಿ, ಪ್ರಿನ್ಸಿಪಾಲ್‌ ಡಾ.ರಾಬಿನ್‌ ಪ್ರಾಮಾಣಿಕ್‌ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next