Advertisement

ಥಳಿತ: ಮೃತ ವ್ಯಕ್ತಿಯ ವಿರುದ್ಧವೇ ಕೇಸು ದಾಖಲು!

01:40 AM Jan 25, 2021 | Team Udayavani |

ಕಾಸರಗೋಡು: ಅಶ್ವಿ‌ನಿ ನಗರದಲ್ಲಿ ತಂಡವೊಂದು ಥಳಿಸಿದ ಅಲ್ಪಹೊತ್ತಿನಲ್ಲೆ ಮೃತಪಟ್ಟ ಚೆಮ್ನಾಡ್‌ ಚಳಿಯಂಗೋಡಿನ ಪ್ರಸ್ತುತ ದೇಳಿ ನಿವಾಸಿ ರಫೀಕ್‌ (49) ಅವರ ಮೃತದೇಹವನ್ನು ಹೆಚ್ಚಿನ ತಪಾಸಣೆಗಾಗಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

Advertisement

ಅವಮಾನಕರ ರೀತಿಯಲ್ಲಿ ನಡೆದು ಕೊಂಡಿರುವ ಬಗ್ಗೆ ಮಹಿಳೆಯೊಬ್ಬರು ನೀಡಿದ ದೂರಿನಂತೆ ಮೃತ ರಫೀಕ್‌ ವಿರುದ್ಧ ಮತ್ತು ರಫೀಕ್‌ ಅವರ ಅಸಹಜ ಸಾವಿನ ಬಗ್ಗೆ ಪ್ರತ್ಯೇಕ ಪ್ರಕರಣ ನಗರ ಠಾಣೆಯಲ್ಲಿ ದಾಖಲಾಗಿದೆ.

ಸಾವಿಗೆ ಥಳಿತ ಕಾರಣವಲ್ಲ; ಹೃದಯಾಘಾತ :

ರಫೀಕ್‌ ಸಾವಿಗೆ ಥಳಿತ ಕಾರಣವಲ್ಲ, ಬದಲಾಗಿ ಹೃದಯಾಘಾತ ಕಾರಣವೆಂದು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆಸಿದ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ತಿಳಿಸಲಾಗಿದೆ. ಕುತ್ತಿಗೆಯಲ್ಲಿ ಸಣ್ಣಪುಟ್ಟ ಗಾಯಗಳಿದ್ದವು. ಆದರೆ ಅದು ಅವರ ಸಾವಿಗೆ ಕಾರಣವಲ್ಲ. ಅವರ ಹೃದಯ ಧಮನಿಯಲ್ಲಿ ಐದು ಬ್ಲಾಕ್‌ಗಳು ಇತ್ತು ಎಂದು ವೈದ್ಯಕೀಯ ಪರೀಕ್ಷಾ ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next