Advertisement

ಹೆಣ್ಣು ಶಿಶುವನ್ನು ಬೀದಿಗೆ ಎಸೆದು ಹೋದ ನೀಚರು: ಕಂದಮ್ಮ ಸಾವು

05:20 PM Aug 29, 2021 | Team Udayavani |

ಯಳಂದೂರು :ರಾಜ್ಯದಲ್ಲಿ ಎಲ್ಲೆಡೆ ಹೆಣ್ಣಿನ ಮೇಲಿನ ದೌರ್ಜನ್ಯದ ಸದ್ದು ಕೇಳಿ ಬರುತ್ತಿರುವ ನಡುವೆ ನವಜಾತ ಹೆಣ್ಣು ಶಿಶುವನ್ನು ಕರುಳ ಬಳ್ಳಿಯನ್ನೂ ಕತ್ತರಿಸದೆ ಬೀದಿಯಲ್ಲೇ ಬೀಸಾಡಿರುವ ಅಮಾನವೀಯ ಘಟನೆ ಭಾನುವಾರ (ಆ.29)ಮುಂಜಾನೆ ಯಳಂದೂರು ಪಟ್ಟಣದಲ್ಲಿ ನಡೆದಿದೆ .

Advertisement

ಪಟ್ಟಣದ ಬಳೇಪೇಟೆಯ ವೈ.ಕೆ.ಮೋಳೆ  ರಸ್ತೆಯ ಬಳಿಯಲ್ಲೇ ಈ ಘಟನೆ ಜರುಗಿದೆ . ಬೆಳ್ಳಂಬೆಳಿಗ್ಗೆ ರಸ್ತೆ ಬದಿಯಲ್ಲಿ ಶಿಶುವಿನ ಶರೀರ ಬಿದ್ದಿರುವ ಬಗ್ಗೆ ಸಾರ್ವಜನಿಕರ ಗಮನಕ್ಕೆ ಬಂದಿದೆ . ಇದನ್ನು ಕಂಡು ಕೂಡಲೇ ಪೊಲೀಸ್ ಇಲಾಖೆಗೆ ಸಾರ್ವಜನಿಕರು ಮಾಹಿತಿ ನೀಡಿದ್ದಾರೆ . ರಸ್ತೆ ಬದಿಯಲ್ಲೇ ಕರುಳು ಬಳ್ಳಿಯನ್ನೂ ಕೂಡ ಕತ್ತರಿಸದೆ ಮಗುವನ್ನು ಬೀಸಾಡಲಾಗಿದ್ದು ಮಗು ಸತ್ತು ಹೋಗಿದೆ .

ಇದನ್ನೂ ಓದಿ:ಬಿಜೆಪಿಯವರ ಯೋಗ್ಯತೆಗೆ ಸುರೇಶ್ ಅಂಗಡಿಯವರ ಮೃತದೇಹ ಬೆಳಗಾವಿಗೆ ತರಲಾಗಲಿಲ್ಲ: ಡಿಕೆ ಶಿವಕುಮಾರ್

ಈ ಕಳೇಬರ ನಾಯಿಗಳ ಪಾಲಾಗದಿರಲಿ ಎಂದು ಸಾರ್ವಜನಿಕರು ಇಲ್ಲೇ ಪೊಲೀಸರು ಬರುವ ವರೆಗೂ ಸುತ್ತುವರೆದು ಇದನ್ನು ರಕ್ಷಣೆ ಮಾಡಿದ್ದಾರೆ . ಎಲ್ಲೆಡೆ ಮಹಿಳೆ ಮೇಲಿನ ದೌರ್ಜನ್ಯ ಅತ್ಯಾಚಾರಗಳು ಅವ್ಯಾಹತವಾಗಿ ನಡೆಯುತ್ತಿದ್ದು ಇದೇ ಸಂದರ್ಭದಲ್ಲಿ ಹೆಣ್ಣು ಮಗು ಎಂಬ ಕಾರಣಕ್ಕೆ ಈ ನವಜಾತ ಶಿಶುವನ್ನು ಹೆತ್ತವರು ಬೀಸಾಡಿ ಹೋಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ . ಇದನ್ನು ಕಂಡು ಸಾರ್ವಜನಿಕರು ಮರುಕ ಪಡುತ್ತಿದ್ದ ದೃಶ್ಯ ಕಂಡುಬಂತು. ಸ್ಥಳಕ್ಕೆ ಪಟ್ಟಣ ಪೊಲೀಸರು ಆಗಮಿಸಿ ಇದನ್ನು ವಶಕ್ಕೆ ಪಡೆದು ಮುಂದಿನ ಕ್ರಮವನ್ನು ವಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next