Advertisement

ತೋಟಕ್ಕೆ ಕಾಡುಕೋಣ ದಾಳಿ

04:02 PM Feb 14, 2021 | Team Udayavani |

ಶೃಂಗೇರಿ: ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಕೆರೆ ಗ್ರಾಪಂನಲ್ಲಿ ಕಾಡೆಮ್ಮೆ, ಕಾಡುಕೋಣಗಳ ದಂಡು ತೋಟಗಳಿಗೆ ದಾಳಿ ಮಾಡಿ ಅಪಾರ ನಷ್ಟಉಂಟು ಮಾಡಿದೆ.

Advertisement

ಹಾದಿ ಕಿರೂರಿನ ರೈತ ಶಿವಪ್ಪ ಗೌಡ, ಲೋಕಮ್ಮ ಹಾಗೂ ಹೊಲ್ಮ ಸುರೇಶ್‌ ಅವರ ಅಡಕೆ ತೋಟಕ್ಕೆ ಹಿಂಡು ಹಿಂಡಾಗಿ ನುಗ್ಗಿದ ಕಾಡೆಮ್ಮೆಗಳು ಅಡಕೆ, ಬಾಳೆ, ಕಾಫಿ ಗಿಡಗಳನ್ನು ನೆಲ ಸಮ ಮಾಡಿವೆ. ಬೆಳೆದು ನಿಂತಿರುವ ಅಡಕೆ ಮರವನ್ನು ಕೆಡವಿರುವ ಗುಂಪು ಕಾಫಿ ಗಿಡವನ್ನು ಧ್ವಂಸ ಮಾಡಿರುವುದರಿಂದ ಕಾμ ಹಣ್ಣು ನೆಲಕಚ್ಚಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಹಗಲು-ರಾತ್ರಿ ಎನ್ನದೆ ದಾಳಿ ನಡೆಸುತ್ತಿರುವ ಕಾಡೆಮ್ಮೆಗಳಿಂದ ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದೆ.

ಇದನ್ನೂ ಓದಿ:ಕಲಾ ಶಿಲ್ಪಮಾದರಿಯಲ್ಲಿ ಸೌಧ ನಿರ್ಮಾಣ

ಕಳೆದ ಕೆಲ ದಿನದ ಹಿಂದಷ್ಟೇ ಮಲಾ°ಡ್‌ ಗ್ರಾಮದಲ್ಲಿ ರೈತರೊಬ್ಬರಿಗೆ ಕಾಡುಕೋಣ ಇರಿದು ಗಂಭೀರವಾಗಿ ಗಾಯಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next