Advertisement

ಕಾಡು ಹಂದಿಗೆ ಹಾಕಿದ್ದ ವಿದ್ಯುತ್ ಲೈನ್ ಸ್ಪರ್ಶಿಸಿ ರೈತ ಸಾವು

01:55 PM Sep 25, 2021 | Team Udayavani |

ಕುಣಿಗಲ್ : ಕಾಡುಹಂದಿಯಿಂದ ಬೆಳೆ ರಕ್ಷಣೆಗೆಂದು ಜಮೀನಿನ ತಂತಿ ಬೇಲಿಗೆ ಹಾಕಲಾಗಿದ್ದ ವಿದ್ಯುತ್ ಲೈನ್ ಸ್ಪರ್ಶಿಸಿ ರೈತನೋರ್ವನ್ನು‌ ಮೃತಪಟ್ಟಿರುವ ಘಟನೆ ತಾಲೂಕಿನ ಹುಲಿಯೂರುದುರ್ಗ ಹೋಬಳಿ ನಿಲಸಂದ್ರ ಹೇರೋಹಳ್ಳಿ ಗ್ರಾಮದಲ್ಲಿ ಕಳೆದ ರಾತ್ರಿ ನಡೆದಿದೆ.

Advertisement

ಹೇರೋಹಳ್ಳಿ ಗ್ರಾಮದ ರಾಮಲಿಂಗಯ್ಯ ಅಲಿಯಾಸ್ ರಾಜು (45) ಮೃತ ರೈತ.  ರಾಮಲಿಂಗಯ್ಯ ಅವರ ಹೆಸರಿನಲ್ಲಿ ತಾಲೂಕಿನ ನಿಲಸಂದ್ರ ಹೇರೋಹಳ್ಳಿ ಗ್ರಾಮದ ಬಳಿ ಏಳು ಎಕರೆ ಜಮೀನಿದ್ದು, ಗೆಣಸು ಬೆಳೆಯನ್ನು ಬೆಳೆದಿರುತ್ತಾನೆ.

ಇದನ್ನೂ ಓದಿ:ಯುಪಿಎಸ್‌ಸಿ ಫಲಿತಾಂಶ : ಬೆಳಗಾವಿಯ ಶಕೀರ ತೊಂಡಿಖಾನ್‌ಗೆ  583ನೇ ರ್‍ಯಾಂಕ್‌

ಗೆಣಸಿನ ಬೆಳೆಯನ್ನು ಕಾಡು ಹಂದಿಗಳು ನಾಶ ಪಡಿಸುತ್ತದೆ ಎಂದು ಜಮೀನಿನ ತಂತಿ ಬೇಲಿಗೆ ವಿದ್ಯುತ್ ಹರಿಸಿದ್ದರು ಎನ್ನಲಾಗಿದ್ದು, ಬೆಳೆ ನೋಡಲು ಹೋದಾಗ ವಿದ್ಯುತ್ ಲೈನ್ ಸ್ಪರ್ಶಿಸಿ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪ್ರಕರಣದ ಕುರಿತಾಗಿ ಹುಲಿಯೂರುದುರ್ಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next