Advertisement

ಹೊಸಪೇಟೆ: ಕೇಬಲ್ ಆಪರೇಟರ್ ಬರ್ಬರ ಹತ್ಯೆ

06:15 PM Mar 21, 2021 | Team Udayavani |

ಹೊಸಪೇಟೆ: ಇತ್ತೀಚಿಗೆ ನಗರದಲ್ಲಿ ಜರುಗಿದ ವಕೀಲರೊಬ್ಬರ ಕೊಲೆ ಪ್ರಕರಣ ಮಾಸುವ‌ ಮುನ್ನವೇ ಸಮೀಪದ ಟಿ.ಬಿ.ಡ್ಯಾಂನಲ್ಲಿ ಕೇಬಲ್ ಆಪರೇಟರ್‌ ಒಬ್ಬರನ್ನು ಶನಿವಾರ ರಾತ್ರಿ ಬರ್ಬರವಾಗಿ  ಕೊಲೆ ಮಾಡಲಾಗಿದೆ.

Advertisement

ಟಿ.ಬಿ.ಡ್ಯಾಂ ನಿವಾಸಿ ಮೈಕಲ್ ಜಾನ್( 40) ಕೊಲೆಯಾದ ಕೇಬಲ್ ಆಪರೇಟರ್ ಎಂದು‌ ಗುರುತಿಸಲಾಗಿದೆ‌. ಟಿ.ಬಿ ಡ್ಯಾಂ ಬಳಿ ಹಾದು‌ ಹೋಗಿರುವ ರಾಷ್ಟ್ರೀಯ ಹೆದ್ದಾರಿ ಫ್ಲೈ ಓವರ್ ಕೆಳಭಾಗದಲ್ಲಿ ದುಷ್ಕರ್ಮಿಗಳು ಮೈಕಲ್ ಜಾನ್ ಅವರನ್ನು  ಕೊಲೆ ಮಾಡಿದ್ದಾರೆ.

ಇದನ್ನೂ ಓದಿ:‘ಜೈ ಶ್ರೀರಾಮ್’ : ಮೋದಿ, ಶಾ ಅವರ ಅಡಿಯಲ್ಲಿ ಕೆಲಸ ಮಾಡುತ್ತೇನೆ : ಸಿಸಿರ್ ಅಧಿಕಾರಿ

ಹತ್ಯೆ ಮಾಡುವ ಮುನ್ನ ಮೃತ ವ್ಯಕ್ತಿಯನ್ನು ಅಟ್ಟಾಡಿಸಿ, ಮಾರಕಸ್ತ್ರಗಳಿಂದ  ಹಲ್ಲೆ ನಡೆಸಿ, ಕಲ್ಲಿನಿಂದ ಮುಖಕ್ಕೆ ಜಜ್ಜಿ ಹತ್ಯೆಗೈದಿದ್ದಾರೆ ಎಂದು ಹೇಳಲಾಗಿದೆ.

ಟಿ.ಬಿ ಡ್ಯಾಂ ಪೊಲೀಸ್ ಠಾಣೆ‌ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಐ ವಿ.ನಾರಾಯಣ ಅವರನ್ನು ಒಳಗೊಂಡಂತೆ ಸಿಬ್ಬಂದಿಗಳು  ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪೊಲೀಸರ ತನಿಖೆಯಿಂದ ಸತ್ಯಾಂಶ ಹೊರ ಬೀಳಬೇಕಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next