Advertisement

ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತೆ ಮೇಲೆ ಅತ್ಯಾಚಾರ: ಕೊಲೆ ಬೆದರಿಕೆ

03:49 PM Sep 05, 2021 | Team Udayavani |

ಭಟ್ಕಳ: ಮುರ್ಡೇಶ್ವರದ ಕನ್ನಡ ಶಾಲೆಯ ಹತ್ತಿರ ಅಪ್ರಾಪ್ತ ಯುವತಿಯನ್ನು ಮದುವೆಯಾಗುವುದಾಗಿ ಪುಸಲಾಯಿಸಿ ಮನೆಯೊಂದಕ್ಕೆ ರಾತ್ರಿ ಕರೆದುಕೊಂಡು ಹೋಗಿ ಅಲ್ಲಿಯೇ ಉಳಿಸಿಕೊಂಡು ಅತ್ಯಾಚಾರ ಎಸಗಿದ ಕುರಿತು ಮುರ್ಡೇಶ್ವರ ಠಾಣೆಯಲ್ಲಿ ಅಪ್ರಾಪ್ತ ಯುವತಿಯ ತಾಯಿ ದೂರು ದಾಖಲಿಸಿದ್ದಾರೆ.

Advertisement

ದೂರಿನಲ್ಲಿ ಆರೋಪಿತನಾದ ಹಿರೋದೋಮಿಯ ಮಾಸ್ತಪ್ಪ ಯಾನೆ ನಿತಿನ್ ಈತನು ನನ್ನ ಅಪ್ರಾಪ್ತ ಮಗಳಿಗೆ ರಾತ್ರಿ ಹೊತ್ತು ದೂರವಾಣಿ ಕರೆ ಮಾಡಿ ಮಾತನಾಡುವುದಿದೆ ಎಂದು ಕರೆಯಿಸಿಕೊಂಡು ಯಾರೂ ಇಲ್ಲದ ಮನೆಯೊಳಗೆ ಕರೆದುಕೊಂಡು ಹೋಗಿ ರಾತ್ರಿಯಿಡೀ ಅಲ್ಲಿಯೇ ಉಳಿಸಿಕೊಂಡು ಅತ್ಯಾಚಾರ ಎಸಗಿದ್ದಾನೆ. ತನ್ನ ಮಗಳು ಎಷ್ಟು ಪ್ರತಿರೋಧ ಒಡ್ಡಿದರೂ ಸಹ ಕೇಳದೆ ಮಗಳ ಮೇಲೆ ಎರಡು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ರೈತರ ಅನಾಥ ಸ್ಥಿತಿ ದೂರವಾಗಬೇಕು: ಹೆಬ್ಬಾರ್

ಈ ವಿಷಯವನ್ನು ಹೊರಗಡೆ ಹೇಳಿದರೆ ನಿನ್ನನ್ನು, ತಂದೆ-ತಾಯಿಯರನ್ನು ಕೂಡಾ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾನೆ ಎಂದು ಹೇಳಿದ್ದಾರೆ. ಘಟನೆಯನ್ನು  ಪೋಸ್ಕೋ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಮುರ್ಡೇಶ್ವರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next