Advertisement

ಗ್ಯಾಂಗ್‌ ರೇಪ್‌: ಇಬ್ಬರ ಕಾಲಿಗೆ ಗುಂಡೇಟು

02:43 PM May 29, 2021 | Team Udayavani |

ಬೆಂಗಳೂರು: ಬಾಂಗ್ಲಾದೇಶ ಮೂಲದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರಹಾಗೂ ದೈಹಿಕ ದೌರ್ಜನ್ಯ ಎಸಗಿದ ಆರೋಪಿಗಳಲ್ಲಿ ಇಬ್ಬರಿಗೆ ರಾಮಮೂರ್ತಿನಗರ ಪೊಲೀಸರು ಗುಂಡೇಟಿನ ರುಚಿ ತೋರಿಸಿದ್ದಾರೆ.

Advertisement

ಬಾಂಗ್ಲಾ ಮೂಲದ ರಕೀಬುಲ್ಲಾ ಇಸ್ಲಾಮ್‌ಸಾಗರ್‌ (27) ಮತ್ತು ರಿದಾಯ್‌ ಬಾಬು(26) ಎಂಬುವರಿಗೆ ಗುಂಡೇಟು ಬಿದ್ದಿದ್ದು,ಆರೋಪಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಇದೇ ವೇಳೆ ಆರೋಪಿಗಳ ಕಲ್ಲೇಟಿನಿಂದ ಎಸಿಪಿಎನ್‌.ಬಿ. ಬಕ್ರಿ ಹಾಗೂ ಪಿಎಸ್‌ಐ ಅರವಿಂದ್‌ ಅವರಿಗೆ ಗಾಯಗಳಾ ಗಿದ್ದು, ಖಾಸಗಿಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಶುಕ್ರವಾರ ಮುಂಜಾನೆ ಆರು ಗಂಟೆಸುಮಾರಿಗೆ ಇಬ್ಬರು ಆರೋಪಿಗಳನ್ನುಬಿ.ಚನ್ನಸಂದ್ರ ಸಮೀಪ ದಲ್ಲಿರುವ ಕನಕನಗರಕ್ಕೆಸ್ಥಳ ಮಹಜರು ಮಾಡಲು ಕರೆದೊಯ್ಯಲಾಗಿತ್ತು. ಆದರೆ, ಆರೋಪಿಗಳು ಹೊಯ್ಸಳವಾಹನದಿಂದ ಇಳಿಯುತ್ತಿದ್ದಂತೆ ಪೊಲೀಸ್‌ಅಧಿಕಾರಿ-ಸಿಬ್ಬಂದಿಯನ್ನು ಪಕ್ಕಕ್ಕೆ ತಳ್ಳಿಪರಾರಿಯಾಗಲು ಯತ್ನಿಸಿದ್ದಾರೆ.

ಆಗ ಎಸಿಪಿಎನ್‌.ಬಿ.ಬಕ್ರಿ ಮತ್ತು ಮತ್ತು ಕಾನ್‌ಸ್ಟೆàಬಲ್‌ವೊಬ್ಬರು ಆರೋಪಿಗಳ ಹಿಡಿಯಲುಹಿಂಬಾಲಿಸಿದ್ದಾರೆ.ಆಗ ಆರೋಪಿಗಳು ಕಲ್ಲುಗಳಿಂದ ದಾಳಿನಡೆಸಿದ್ದು, ಇನ್‌ಸ್ಪೆಕ್ಟರ್‌ ಮೆಲ್ವಿನ್‌ ಅವರುಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿಶರಣಾಗುವಂತೆ ಸೂಚಿಸಿದರು. ಮತ್ತೆಯೂಕಲ್ಲು ತೂರಾಟ ನಡೆಸಿದ್ದಾರೆ. ಆಗ ಪಿಐಮೆಲ್ವಿನ್‌ ಆರೋಪಿಯೊಬ್ಬನಿಗೆ ಗುಂಡುಹಾರಿಸಿದ್ದು, ಒಬ್ಬನ ಕಾಲಿಗೆ ತಗುಲಿದೆ.

ಮತ್ತೂಬ್ಬ ಆರೋಪಿ ಕೂಡ ಪಿಎಸ್‌ಐಅರವಿಂದ್‌ ಮೇಲೆ ಕಲ್ಲು ಎಸೆದುತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದಾನೆ. ಆಗಪಿಎಸ್‌ಐ ಮತ್ತೂಬ್ಬ ಆರೋಪಿ ಕಾಲಿಗೆ ಗುಂಡುಹಾರಿಸಿದ್ದು, ಇಬ್ಬರನ್ನು ಬಂಧಿಸಲಾಗಿದೆ ಎಂದುಪೊಲೀಸರು ಹೇಳಿದರು.ಬಂಧನಕ್ಕೊಳಗಾಗಿರುವ ನಾಲ್ವರುಆರೋಪಿಗಳ ಪೈಕಿ ರಿದಾಯಿ ಬಾಬು ವೈರಲ್‌ಆಗಿರುವ ವಿಡಿಯೊದಲ್ಲಿ ಸಂತ್ರಸ್ತೆಯ ತಲೆಹಿಡಿದು ಹಲ್ಲೆ ನಡೆಸಿದ್ದಾನೆ. ಇತರೆ ಮೂವರುರಿದಾಯಿ ಬಾಬು ಜತೆ ದೌರ್ಜನ್ಯ ನಡೆಸಿದ್ದಾರೆ.ಲೈಂಗಿಕ ದೌರ್ಜನ್ಯ ಎಸಗಿದ ಇತರೆಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆಎಂದು ಪೊಲೀಸರು ಮಾಹಿತಿ ನೀಡಿದರು.

ಹಣಕಾಸು ವಿಚಾರವಾಗಿ ಗಲಾಟೆ

Advertisement

ಆರೋಪಿಗಳ ವಿಚಾರಣೆಯಲ್ಲಿ ಸಂತ್ರಸ್ತೆ ಕೇರಳದಲ್ಲಿ ಸ್ಪಾಕೆಲಸ ಶುರು ಮಾಡಿದ್ದು, ಬೆಂಗಳೂರಿನಲ್ಲಿದ್ದ ಮೂವರುಯುವತಿಯರನ್ನು ಅಲ್ಲಿಗೆ ಕಳುಹಿಸಿದ್ದಳು. ಈಯುವತಿಯರನ್ನು ಆರೋಪಿಗಳು ಕರೆತಂದಿ ದ್ದರಿಂದಅವರಿಗೆ ಸಂತ್ರಸ್ತೆ ಸೂಕ್ತ ಹಣ ನೀಡಿರಲಿಲ್ಲ. ಅದರಿಂದಇಬ್ಬರ ನಡುವೆ ಗಲಾಟೆಯಾಗಿತ್ತು. ಅನಂತರ ಸಂಚುರೂಪಿಸಿ ಮಾತುಕತೆ ನಡೆಸ ಬೇಕೆಂದು ಸಂತ್ರಸ್ತೆಯನ್ನುನಗರಕ್ಕೆ ಕರೆಯಿಸಿಕೊಂಡಿ ದ್ದರು.

ಮೇ 19ರಂದುಹೈದರಾಬಾದ್‌ ನಿಂದ ಬೆಂಗಳೂರು ಬಂದಿದ್ದಳು.ರಾಮಮೂರ್ತಿ ನಗರದ ಮನೆಯಲ್ಲಿ ಇದೇ ವಿಚಾರಕ್ಕೆಚರ್ಚೆ ನಡೆದಿತ್ತು. ಮೊದಲು ಮದ್ಯದ ಪಾರ್ಟಿಮಾಡಿದ್ದ ಗ್ಯಾಂಗ್‌, ನಂತರ ಹಣಕಾಸಿನ ವಿಚಾರತೆಗೆದು ಯುವತಿ ವಿರುದ್ಧ ಗಲಾಟೆ ಶುರು ಮಾಡಿದೆ.ಬಳಿಕ ನಮಗೆ ಮೋಸ ಮಾಡುತ್ತಿದ್ದಿಯಾ ಎಂದುಗಲಾಟೆ ಮಾಡಿದ್ದಾರೆ.ಬಳಿಕ ಆಕೆ ಮೇಲೆ ಹಲ್ಲೆ ನಡೆಸಿದ್ದಾರೆ. ಅದಕ್ಕೂಸಂತ್ರಸ್ತೆ ಬಗದ್ದಿದ್ದಾಗ ಆಕೆ ಮೇಲೆ ಲೈಂಗಿಕ ದೌರ್ಜನ್ಯಎಸಗಿದ್ದಾರೆ.

ಅದನ್ನು ಚಿತ್ರೀಕರಿಸಿಕೊಂಡು ಬ್ಲ್ಯಾಕ್‌ಮೇಲ್‌ಗೆ ಚಿಂತಿಸಿದ್ದರು. ಆದರೆ, ಆ ವಿಡಿಯೊವನ್ನುಮದ್ಯದ ಅಮಲಿನಲ್ಲಿ ಬೇರೆಯವರಿಗೆ ಶೇರ್‌ಮಾಡಿದ್ದಾರೆ. ಘಟನೆ ಬಳಿಕ ವಿಡಿಯೊ ಹೈದ್ರಾಬಾದ್‌ನಒಬ್ಬನಿಗೆ ಹೋಗಿತ್ತು. ಆ ವಿಡಿಯೊ ನೋಡಿದ ಬಳಿಕಪ್ರಕರಣ ದಾಖಲಿಸುವುದಾಗಿ ಸಂತ್ರಸ್ತೆ ಕಡೆಯವರುಅರೋಪಿಗಳಿಗೆ ಬೆದರಿಕೆ ಹಾಕಿದ್ದರು. ಅಲ್ಲದೆ, 7 ಲಕ್ಷಹಣ ಕೊಟ್ಟರೆ ಪೊಲೀಸರಿಗೆ ದೂರು ಕೊಡುವುದಿಲ್ಲಎಂದಿದ್ದರಂತೆ. ಹಣ ನೀಡಿ ಆರೋಪಿಗಳು ಇತ್ಯರ್ಥಪಡಿಸಿಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.

ಗ್ಯಾಂಗ್ರೇಪ್‌: ಇಬ್ಬರ ಕಾಲಿಗೆ ಗುಂಡೇಟು

ಬೆಂಗಳೂರು: ಬಾಂಗ್ಲಾದೇಶ ಮೂಲದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರಹಾಗೂ ದೈಹಿಕ ದೌರ್ಜನ್ಯ ಎಸಗಿದ ಆರೋಪಿಗಳಲ್ಲಿ ಇಬ್ಬರಿಗೆ ರಾಮಮೂರ್ತಿನಗರ ಪೊಲೀಸರು ಗುಂಡೇಟಿನ ರುಚಿ ತೋರಿಸಿದ್ದಾರೆ.

ಬಾಂಗ್ಲಾ ಮೂಲದ ರಕೀಬುಲ್ಲಾ ಇಸ್ಲಾಮ್‌ಸಾಗರ್‌ (27) ಮತ್ತು ರಿದಾಯ್‌ ಬಾಬು(26) ಎಂಬುವರಿಗೆ ಗುಂಡೇಟು ಬಿದ್ದಿದ್ದು,ಆರೋಪಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಇದೇ ವೇಳೆ ಆರೋಪಿಗಳ ಕಲ್ಲೇಟಿನಿಂದ ಎಸಿಪಿಎನ್‌.ಬಿ. ಬಕ್ರಿ ಹಾಗೂ ಪಿಎಸ್‌ಐ ಅರವಿಂದ್‌ ಅವರಿಗೆ ಗಾಯಗಳಾ ಗಿದ್ದು, ಖಾಸಗಿಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಶುಕ್ರವಾರ ಮುಂಜಾನೆ ಆರು ಗಂಟೆಸುಮಾರಿಗೆ ಇಬ್ಬರು ಆರೋಪಿಗಳನ್ನುಬಿ.ಚನ್ನಸಂದ್ರ ಸಮೀಪ ದಲ್ಲಿರುವ ಕನಕನಗರಕ್ಕೆಸ್ಥಳ ಮಹಜರು ಮಾಡಲು ಕರೆದೊಯ್ಯಲಾಗಿತ್ತು. ಆದರೆ, ಆರೋಪಿಗಳು ಹೊಯ್ಸಳವಾಹನದಿಂದ ಇಳಿಯುತ್ತಿದ್ದಂತೆ ಪೊಲೀಸ್‌ಅಧಿಕಾರಿ-ಸಿಬ್ಬಂದಿಯನ್ನು ಪಕ್ಕಕ್ಕೆ ತಳ್ಳಿಪರಾರಿಯಾಗಲು ಯತ್ನಿಸಿದ್ದಾರೆ.

ಆಗ ಎಸಿಪಿಎನ್‌.ಬಿ.ಬಕ್ರಿ ಮತ್ತು ಮತ್ತು ಕಾನ್‌ಸ್ಟೆàಬಲ್‌ವೊಬ್ಬರು ಆರೋಪಿಗಳ ಹಿಡಿಯಲುಹಿಂಬಾಲಿಸಿದ್ದಾರೆ.ಆಗ ಆರೋಪಿಗಳು ಕಲ್ಲುಗಳಿಂದ ದಾಳಿನಡೆಸಿದ್ದು, ಇನ್‌ಸ್ಪೆಕ್ಟರ್‌ ಮೆಲ್ವಿನ್‌ ಅವರುಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿಶರಣಾಗುವಂತೆ ಸೂಚಿಸಿದರು. ಮತ್ತೆಯೂಕಲ್ಲು ತೂರಾಟ ನಡೆಸಿದ್ದಾರೆ. ಆಗ ಪಿಐಮೆಲ್ವಿನ್‌ ಆರೋಪಿಯೊಬ್ಬನಿಗೆ ಗುಂಡುಹಾರಿಸಿದ್ದು, ಒಬ್ಬನ ಕಾಲಿಗೆ ತಗುಲಿದೆ.

ಮತ್ತೂಬ್ಬ ಆರೋಪಿ ಕೂಡ ಪಿಎಸ್‌ಐಅರವಿಂದ್‌ ಮೇಲೆ ಕಲ್ಲು ಎಸೆದುತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದಾನೆ. ಆಗಪಿಎಸ್‌ಐ ಮತ್ತೂಬ್ಬ ಆರೋಪಿ ಕಾಲಿಗೆ ಗುಂಡುಹಾರಿಸಿದ್ದು, ಇಬ್ಬರನ್ನು ಬಂಧಿಸಲಾಗಿದೆ ಎಂದುಪೊಲೀಸರು ಹೇಳಿದರು.ಬಂಧನಕ್ಕೊಳಗಾಗಿರುವ ನಾಲ್ವರುಆರೋಪಿಗಳ ಪೈಕಿ ರಿದಾಯಿ ಬಾಬು ವೈರಲ್‌ಆಗಿರುವ ವಿಡಿಯೊದಲ್ಲಿ ಸಂತ್ರಸ್ತೆಯ ತಲೆಹಿಡಿದು ಹಲ್ಲೆ ನಡೆಸಿದ್ದಾನೆ. ಇತರೆ ಮೂವರುರಿದಾಯಿ ಬಾಬು ಜತೆ ದೌರ್ಜನ್ಯ ನಡೆಸಿದ್ದಾರೆ.ಲೈಂಗಿಕ ದೌರ್ಜನ್ಯ ಎಸಗಿದ ಇತರೆಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆಎಂದು ಪೊಲೀಸರು ಮಾಹಿತಿ ನೀಡಿದರು.

ಹಣಕಾಸು ವಿಚಾರವಾಗಿ ಗಲಾಟೆ

ಆರೋಪಿಗಳ ವಿಚಾರಣೆಯಲ್ಲಿ ಸಂತ್ರಸ್ತೆ ಕೇರಳದಲ್ಲಿ ಸ್ಪಾಕೆಲಸ ಶುರು ಮಾಡಿದ್ದು, ಬೆಂಗಳೂರಿನಲ್ಲಿದ್ದ ಮೂವರುಯುವತಿಯರನ್ನು ಅಲ್ಲಿಗೆ ಕಳುಹಿಸಿದ್ದಳು. ಈಯುವತಿಯರನ್ನು ಆರೋಪಿಗಳು ಕರೆತಂದಿ ದ್ದರಿಂದಅವರಿಗೆ ಸಂತ್ರಸ್ತೆ ಸೂಕ್ತ ಹಣ ನೀಡಿರಲಿಲ್ಲ. ಅದರಿಂದಇಬ್ಬರ ನಡುವೆ ಗಲಾಟೆಯಾಗಿತ್ತು. ಅನಂತರ ಸಂಚುರೂಪಿಸಿ ಮಾತುಕತೆ ನಡೆಸ ಬೇಕೆಂದು ಸಂತ್ರಸ್ತೆಯನ್ನುನಗರಕ್ಕೆ ಕರೆಯಿಸಿಕೊಂಡಿ ದ್ದರು.

ಮೇ 19ರಂದುಹೈದರಾಬಾದ್‌ ನಿಂದ ಬೆಂಗಳೂರು ಬಂದಿದ್ದಳು.ರಾಮಮೂರ್ತಿ ನಗರದ ಮನೆಯಲ್ಲಿ ಇದೇ ವಿಚಾರಕ್ಕೆಚರ್ಚೆ ನಡೆದಿತ್ತು. ಮೊದಲು ಮದ್ಯದ ಪಾರ್ಟಿಮಾಡಿದ್ದ ಗ್ಯಾಂಗ್‌, ನಂತರ ಹಣಕಾಸಿನ ವಿಚಾರತೆಗೆದು ಯುವತಿ ವಿರುದ್ಧ ಗಲಾಟೆ ಶುರು ಮಾಡಿದೆ.ಬಳಿಕ ನಮಗೆ ಮೋಸ ಮಾಡುತ್ತಿದ್ದಿಯಾ ಎಂದುಗಲಾಟೆ ಮಾಡಿದ್ದಾರೆ.ಬಳಿಕ ಆಕೆ ಮೇಲೆ ಹಲ್ಲೆ ನಡೆಸಿದ್ದಾರೆ. ಅದಕ್ಕೂಸಂತ್ರಸ್ತೆ ಬಗದ್ದಿದ್ದಾಗ ಆಕೆ ಮೇಲೆ ಲೈಂಗಿಕ ದೌರ್ಜನ್ಯಎಸಗಿದ್ದಾರೆ.

ಅದನ್ನು ಚಿತ್ರೀಕರಿಸಿಕೊಂಡು ಬ್ಲ್ಯಾಕ್‌ಮೇಲ್‌ಗೆ ಚಿಂತಿಸಿದ್ದರು. ಆದರೆ, ಆ ವಿಡಿಯೊವನ್ನುಮದ್ಯದ ಅಮಲಿನಲ್ಲಿ ಬೇರೆಯವರಿಗೆ ಶೇರ್‌ಮಾಡಿದ್ದಾರೆ. ಘಟನೆ ಬಳಿಕ ವಿಡಿಯೊ ಹೈದ್ರಾಬಾದ್‌ನಒಬ್ಬನಿಗೆ ಹೋಗಿತ್ತು. ಆ ವಿಡಿಯೊ ನೋಡಿದ ಬಳಿಕಪ್ರಕರಣ ದಾಖಲಿಸುವುದಾಗಿ ಸಂತ್ರಸ್ತೆ ಕಡೆಯವರುಅರೋಪಿಗಳಿಗೆ ಬೆದರಿಕೆ ಹಾಕಿದ್ದರು. ಅಲ್ಲದೆ, 7 ಲಕ್ಷಹಣ ಕೊಟ್ಟರೆ ಪೊಲೀಸರಿಗೆ ದೂರು ಕೊಡುವುದಿಲ್ಲಎಂದಿದ್ದರಂತೆ. ಹಣ ನೀಡಿ ಆರೋಪಿಗಳು ಇತ್ಯರ್ಥಪಡಿಸಿಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next