Advertisement

ಮದನಮಟ್ಟಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಜಲಾವೃತ

07:55 PM Jul 25, 2021 | Team Udayavani |

ಬನಹಟ್ಟಿ: ಕೃಷ್ಣಾ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬಂದ ಪರಿಣಾಮವಾಗಿ ತಾಲ್ಲೂಕಿನ ಮದನಮಟ್ಟಿ ಗ್ರಾಮಕ್ಕೆ ಹಾಗೂ ಕೃಷ್ಣಾ ನದಿಗೆ ಸಂಪರ್ಕ ಕಲ್ಪಿಸುವ ಸೇತುವೆ ಸಂಪೂರ್ಣವಾಗಿ ಜಲಾವೃತಗೊಂಡಿದೆ.

Advertisement

ಇದರಿಂದಾಗಿ ಜನರು ಸುತ್ತು ಹಾಕಿ ತೋಟದ ರಸ್ತೆ ಮಾರ್ಗದ ಮೂಲಕ ಮದನಮಟ್ಟಿ, ಹಳಿಂಗಳಿ, ತಮದಡ್ಡಿ ಹಾಗೂ ತೇರದಾಳಕ್ಕೆ ಹೋಗುತ್ತಿದ್ದಾರೆ. ಶನಿವಾರ ಸಂಜೆ ಸೇತುವೆ ಕೆಳಗಿ ನೀರು ಇತ್ತು. ಭಾನುವಾರ ಬೆಳಗ್ಗೆ ಸೇತುವೆ ಸಂಪೂರ್ಣ ಜಲಾವೃತಗೊಂಡಿದ್ದರಿಂದ ಸಂಚಾರಕ್ಕೆ ಬಹಳಷ್ಟು ತೊಂದರೆಯಾಯಿತು.

ಇದನ್ನೂಓದಿ:ಬಿಜೆಪಿ ಬಿಡಲ್ಲ..ಕಾಂಗ್ರೆಸ್ ಸೇರೊಲ್ಲ : ಶಾಸಕ ನಡಹಳ್ಳಿ ಸ್ಪಷ್ಟನೆ

ಮೋಟಾರ್ತರಲು ಹರಸಾಹಸ ಪಟ್ಟರು ರೈತರು: ಭಾನುವಾರ ಬೆಳಗ್ಗೆ ಅಪಾರ ಪ್ರಮಾಣದ ನೀರು ಬಂದ ಪರಿಣಾಮವಾಗಿ ನದಿ ತೀರದಲ್ಲಿದ್ದ ನೀರಿನ ಪಂಪ್‍ ಸೇಟ್‍ಗಳನ್ನು ತೆಗೆದುಕೊಂಡು ಬರಲು ರೈತರು ಹರ ಸಾಹಸ ಪಟ್ಟರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next