Advertisement

ರಾಮದುರ್ಗ: ರಥೋತ್ಸವ ವೇಳೆ ಸಿಡಿದ ಪಟಾಕಿ; ಕಿಡಿ ತಾಗಿ ರಥಕ್ಕೆ ಹೊತ್ತಿಕೊಂಡ ಬೆಂಕಿ

12:17 PM Dec 29, 2021 | Team Udayavani |

ರಾಮದುರ್ಗ( ಬೆಳಗಾವಿ): ರಥೋತ್ಸವ ಜರುಗುವ ವೇಳೆ ಪಟಾಕಿ ಕಿಡಿ ರಥಕ್ಕೆ ಅಲಂಕರಿಸಿದ ಬಟ್ಟೆ ಹಾಗೂ ಹೂವಿನ ಮಾಲೆಗೆ ತಗುಲಿ ಬೆಂಕಿ ಹತ್ತಿರುವ ಘಟನೆ ರಾಮದುರ್ಗ ತಾಲೂಕಿನ ಶಿವಪೇಟೆಯಲ್ಲಿ ಮಂಗಳವಾರ ಸಂಭವಿಸಿದೆ.

Advertisement

ಗ್ರಾಮದ ಜಡಿಸಿದ್ದೇಶ್ವರ ರಥೋತ್ಸವ ಮಂಗಳವಾರ ಸಂಜೆ 5.30ಕ್ಕೆ  ನೂರಾರು ಭಕ್ತರು ಎಳೆಯುತ್ತಿದ್ದ ಸಂದರ್ಭದಲ್ಲಿ ಪಟಾಕಿ ಹಚ್ಚಿದ್ದು, ಒಂದು ಕಿಡಿ ಸಿಡಿದು ರಥದ ಬಟ್ಟೆಗೆ ತಾಗಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣದಲ್ಲಿ ಭಕ್ತರು ಬೆಂಕಿ ನಂದಿಸಿದ್ದು ದೊಡ್ಡ ದುರಂತದಿಂದ ಪಾರಾಗಿದ್ದಾರೆ.

ಅಂಥದ್ದೇನು ದೊಡ್ಡ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿಲ್ಲ ಎಂದು ಹೇಳಲಾಗುತ್ತಿದ್ದರೂ ರಥಕ್ಕೆ ಬೆಂಕಿ ತಗುಲಿರುವುದಕ್ಕೆ ಅಪಶಕುನವಾಯಿತು. ಮುಂದೇನು ಆಪತ್ತು ಕಾದಿದೆ ಎಂದು ಭಕ್ತರಲ್ಲಿ ಆತಂಕ ಮೂಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next