Advertisement

ಸುರತ್ಕಲ್: ಜೆಪ್ಪು ಬಲೆ ಕಾಲಿಗೆ ಸಿಲುಕಿ ವ್ಯಕ್ತಿ ಸಾವು

08:12 PM Dec 21, 2020 | Suhan S |

ಸುರತ್ಕಲ್: ಜೆಪ್ಪು ಬಲೆ ಹರಡುತ್ತಿದ್ದಾಗ ಬಲೆಗೆ ಸಿಲುಕಿ ವ್ಯಕ್ತಿಯೋರ್ವರು ಮೃತಪಟ್ಟಿರುವ ಘಟನೆ ಗುಡ್ಡೆ ಕೊಪ್ಲ ಸಮುದ್ರ ಕಿನಾರೆಯಲ್ಲಿ ಸೋಮವಾರ ನಡೆದಿದೆ.

Advertisement

ಲೋಕೇಶ್ ಕೋಟ್ಯಾನ್(40)  ಬಲೆಗೆ ಸಿಲುಕಿ ಮೃತಪಟ್ಟ ವ್ಯಕ್ತಿ. ಸಮುದ್ರ ದಡದಲ್ಲಿ  ಸುರಕ್ಷತೆಯ ರಬ್ಬರ್ ಟ್ಯೂಬ್ ಹಾಕಿ ಈಜಿಕೊಂಡು ಬಲೆ ಬಿಡುತ್ತಿದ್ದಾಗ ಬೃಹತ್ ತೆರೆ ಬಂದಾಗ, ಆಕಸ್ಮಿಕವಾಗಿ ಲೋಕೇಶ್ ಕಾಲಿಗೆ ಬಲೆ ಸಿಲುಕಿಕೊಂಡಿತ್ತು. ಬಲೆ ಬಿಡಿಸಲು ಯತ್ನಿಸಿದಾಗ ಸುರಕ್ಷತೆಯ ಟ್ಯೂಬ್ ಜಾರಿ ಬಿದ್ದು ಈ ದುರಂತ ಸಂಭವಿಸಿದೆ ಎನ್ನಲಾಗಿದೆ.ಅಲ್ಲೇ ಇದ್ದ ಮೀನುಗಾರರು ರಕ್ಷಣೆಗೆ ಧಾವಿಸಿ ಆಸ್ಪತ್ರೆಗೆ ಸಾಗಿಸಿದರಾದರೂ  ಚಿಕಿತ್ಸೆ ಫಲಕಾರಿ ಆಗದೆ ಲೋಕೇಶ್ ಮೃತಪಟ್ಟರು.

ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next