Advertisement

ಕುತ್ಯಾರು: ಸರಣಿ ಅಪಘಾತ ನಡೆಸಿದ ಟೆಂಪೋ ಪಲ್ಟಿ; ಚಾಲಕನ್ನ ಹಿಡಿದು ಕೊಟ್ಟ ಸ್ಥಳೀಯರು

08:32 PM Oct 23, 2022 | Team Udayavani |

ಶಿರ್ವ: ಗುಜರಿ ಸಾಗಿಸುತ್ತಿದ್ದ ಟೆಂಪೋವೊಂದು ಸರಣಿ ಅಪಘಾತ ನಡೆಸಿ ಕುತ್ಯಾರು ಸೂರ್ಯಚೈತನ್ಯ ಶಾಲೆಯ ಬಸ್‌ ತಂಗುದಾಣದ ಬಳಿ ಪಲ್ಟಿಯಾದ ಘಟನೆ ರವಿವಾರ (ಅ. 23ರಂದು) ಸಂಜೆ ನಡೆದಿದೆ.

Advertisement

ಶಿರ್ವದಿಂದ ಟೆಂಪೋದಲ್ಲಿ ಮುಲ್ಕಿಯ ಕೊಲ್ನಾಡಿಗೆ ಗುಜರಿ ಸಾಗಿಸುತ್ತಿದ್ದ ಟೆಂಪೋ ಚಾಲಕ ಕುತ್ಯಾರು ಉಪ್ಪರಿಗೆ ಮನೆ ತಿರುವಿನ ಬಳಿ ಹೊಂಡಾ ಆಕ್ಟಿವಾಗೆ ಢಿಕ್ಕಿ ಹೊಡೆದಿದ್ದು ರಫೀಕ್‌ ಎಂಬವರು ಗಾಯಗೊಂಡಿದ್ದಾರೆ. ಅಲ್ಲಿಂದ ಮುಂದೆ ಸಂಪತ್‌ ಕುಮಾರ್‌ ಅವರ ಮನೆಯ ತಿರುವಿನ ಬಳಿ ಮತ್ತೂಂದು ಹೊಂಡಾ ಆಕ್ಟಿವಾಗೆ ಢಿಕ್ಕಿ ಹೊಡೆದು ಸದಾಶಿವ ಆಚಾರ್ಯ ಎಂಬವರು ಗಾಯಗೊಂಡಿದ್ದಾರೆ. ಢಿಕ್ಕಿಯ ಪರಿಣಾಮ ಸದಾಶಿವ ಆಚಾರ್ಯ ಅವರ ವಾಹನ ನುಜ್ಜುಗುಜ್ಜಾಗಿದ್ದು,ಅಪಾಯದಿಂದ ಪಾರಾಗಿದ್ದಾರೆ.

ಎರಡೂ ಕಡೆ ಅಪಘಾತ ನ‌ಡೆಸಿ ನಿಲ್ಲಿಸದೆ ಹೋಗಿದ್ದ ಟೆಂಪೋ ಕುತ್ಯಾರು ಸೂರ್ಯಚೈತನ್ಯ ಶಾಲೆಯ ಬಸ್‌ ತಂಗುದಾಣದ ಬಳಿ ಪಲ್ಟಿ ಹೊಡೆದಿದ್ದು, ಚಾಲಕ ಮುಲ್ಕಿ ಕೊಲ್ನಾಡು ನಿವಾಸಿ ಕಲಂದರ್ ಶಾ (38) ಅಲ್ಲಿಂದ ಪರಾರಿಯಾಗಿದ್ದಾನೆ. ಕುತ್ಯಾರು ಗ್ರಾಮಸ್ಥರು ಆತನನ್ನು ಹಿಡಿದು ಶಿರ್ವ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಸ್ಥಳದಲ್ಲಿ ಸಿಕ್ಕಿಬಿದ್ದ ವೇಳೆ ನನ್ನ ಹೆಸರು ರಾಜೇಶ ಎಂದು ಸುಳ್ಳು ಹೇಳಿದ್ದಾನೆ.

ಶಿರ್ವ ಪೊಲೀಸರು ಬಾಯಿ ಬಿಡಿಸಿದಾಗ ಆತನ ನಿಜವಾದ ಹೆಸರು ಕಲಂದರ್ ಎಂದು ತಿಳಿದು ಬಂದಿದೆ. ತನಿಖೆ ಮುಂದುವರಿದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next