Advertisement

ಜಿಂಕೆ ಕೊಂಬು ಮಾರಾಟ ಯತ್ನ; ಓರ್ವನ ಬಂಧನ

01:05 PM Oct 10, 2021 | Team Udayavani |

ಸಾಗರ: ಅಕ್ರಮವಾಗಿ ಜಿಂಕೆ ಕೊಂಬುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಸಾಗರ ಪೊಲೀಸ್ ಅರಣ್ಯ ಸಂಚಾರಿದಳ ವಶಕ್ಕೆ ಪಡೆದ ಘಟನೆ ಶನಿವಾರ ನಡೆದಿದೆ.

Advertisement

ಖಚಿತ ಮಾಹಿತಿ ಮೇರೆಗೆ ಪೊಲೀಸ್ ಅರಣ್ಯ ಸಂಚಾರಿ ದಳ ಸಾಗರ ವಿಭಾಗವು ಅಕ್ರಮವಾಗಿ ಜಿಂಕೆ ಕೊಂಬುಗಳನ್ನು ಸಂಗ್ರಹಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಶಿವಮೊಗ್ಗ ತಾಲೂಕಿನ ಯರೇಕೊಪ್ಪ ವಾಸಿ ಟಿ. ನಾಗೇಶ್ ನಾಯ್ಕ ಬಿನ್ ಟೀಕ್ಯಾ ನಾಯ್ಕ ಎಂಬಾತನನ್ನು ಶಿವಮೊಗ್ಗದ ತ್ಯಾವರೆಕೊಪ್ಪ ಬಳಿ ಮಾಲುಸಹಿತ ವಶಕ್ಕೆ ಪಡೆದಿದ್ದಾರೆ.

ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ದಾಳಿಯಲ್ಲಿ ಪೊಲೀಸ್ ಅರಣ್ಯ ಸಂಚಾರಿ ದಳದ ಪಿಎಸ್‌ಐ ಮಲ್ಲಿಕಾರ್ಜುನ್ ಬಿ., ಸಿಬ್ಬಂದಿ ಗಣೇಶ್ ಬಿ.ಸಿ., ರತ್ನಾಕರ್, ಗಿರೀಶ್ ಕುಮಾರ್, ಶಿವರುದ್ರಯ್ಯ, ಮಹಮ್ಮದ್ ರಫೀಕ್ ಕೃಷ್ಣ ಜಿ., ಮಹೇಶ್ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next