Advertisement

ರಾಮನಗರ: ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ರೈಲಿಗೆ ಸಿಲುಕಿ ರೌಡಿ ಶೀಟರ್  ಸಾವು

10:22 PM Apr 07, 2022 | Team Udayavani |

ರಾಮನಗರ: ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಗರದ ಹೊರವಲಯದ ಬಸವನಪುರ ಗೇಟ್ ಬಳಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ರೈಲಿಗೆ ಸಿಲುಕಿ ರೌಡಿ ಶೀಟರ್ ಒಬ್ಬ ಮೃತ ಪಟ್ಟಿದ್ದಾನೆ.

Advertisement

ಬೆಂಗಳೂರು ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್ ದಿಲೀಪ್(28) ಮೃತ ಪಟ್ಟಿರುವ ವ್ಯಕ್ತಿ.

ಎರಡು‌ ಕಾರುಗಳಲ್ಲಿ ಮೈಸೂರಿನಿಂದ ಬೆಂಗಳೂರು ಕಡೆಗೆ ದೀಪಕ್ ಮತ್ತು ಸ್ನೇಹಿತರು ಪ್ರಯಾಣಿಸುತ್ತಿದ್ದರು.

ಅತಿ ವೇಗವಾಗಿ ಚಲಿಸುತ್ತಿದ್ದ ದಿಲೀಪ್ ಇದ್ದ ಕಾರು ರಾಮನಗರ ನಗರ ವ್ಯಾಪ್ತಿಯನ್ನು ದಾಟುವ ವೇಳೆಯೂ ವೇಗ ನಿಯಂತ್ರಿಸಿರಲಿಲ್ಲ.

ಈ ವೇಳೆ ಬಸವನಪುರ ಗ್ರಾಮದ ಬಳಿ ಪೊಲೀಸರು ವಾಹನಗಳ ತಪಾಸಣೆ ಮಾಡುತ್ತಿದ್ದರು. ಅತಿ ವೇಗವಾಗಿ ಚಲಿಸುತ್ತಿದ್ದ ಕಾರು  ಕಾರು ತಡೆಯಲು ಮುಂದಾದರು. ಪೊಲೀಸರನ್ನು ಕಂಡ‌ ಕಾರಿನ ಚಾಲಕ ಯೂ ಟರ್ನ್ ತೆಗೆದುಕೊಂಡು ಬಸವನ ಪುರ ಗ್ರಾಮದ ರಸ್ತೆಗೆ ತಿರುಗಿಸಿದ್ದಾರೆ. ಈ ವೇಳೆ ಕಾರಿನಿಂದ ತಪ್ಪಿಸಿಕೊಂಡು ಹೋಗಿ ರೈಲಿಗೆ ಸಿಲುಕಿ ಸಾವನ್ನು ಅಪ್ಪಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

Advertisement

ರಾಮನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು. ಸ್ಥಳಕ್ಕ ರಾಮನಗರ ಎಸ್ ಪಿ‌ ಸಂತೋಷ್ ಬಾಬು ಭೇಟಿ ಕೊಟ್ಟು ಪರಿಶೀಲನೆ ಉಳಿದ ಮೂವರು ಪೊಲೀಸರು ವಶದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next