Advertisement

ಪುತ್ತೂರು: ಕರು ಮಾರಾಟ- ಖರೀದಿ ವಿಚಾರದಲ್ಲಿ ಹಲ್ಲೆ; ಇಬ್ಬರು ಆಸ್ಪತ್ರೆಗೆ ದಾಖಲು

10:03 PM Jun 20, 2022 | Team Udayavani |

ಪುತ್ತೂರು: ಕರು ಮಾರಾಟ, ಖರೀದಿ ವಿಚಾರವಾಗಿ ಜಗಳ ನಡೆದು, ಇಬ್ಬರು ಸರಕಾರಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.

Advertisement

ಆರ್ಯಾಪು ಗ್ರಾಮ ಪಂಚಾಯತ್  ಸದಸ್ಯ ಅಶೋಕ್ ನಾಯ್ಕ್ ಮತ್ತು ಅಜಿತ್ ರೈ ಕುರಿಯ ಅವರ ಮೇಲೆ ರಿಜ್ವಾನ್ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಅಜಿತ್ ಅವರಿಗೆ ರಿಜ್ವಾನ ಅವರು ಮೂರು ತಿಂಗಳ ಕರು ಎಂದು ಒಂದು ತಿಂಗಳ ಕರುವನ್ನು ನೀಡಿರುವುದಾಗಿ, ಇದರಿಂದ  ಅಜಿತ್  ಅವರು ಕರುವನ್ನು ಹಿಂತಿರುಗಿ ಕೊಂಡೊಯ್ಯುವಂತೆ ಹೇಳಿದ್ದು, ಈ ವಿಚಾರವಾಗಿ ಸೋಮವಾರ ಅಜಿತ್ ಹಾಗೂ ಗ್ರಾ.ಪಂ.ಸದಸ್ಯನಿಗೆ ಹಲ್ಲೆ ನಡೆಸಿರುವುದಾಗಿ ಗಾಯಾಳುಗಳು ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next