Advertisement

Crime: ತವರು ಮನೆಗೆ 1 ಕೋಟಿ ರೂ.ಕೊಟ್ಟಿದ್ದಕ್ಕೆ ಪತ್ನಿಯ ಕೊಂದ ಪತಿ

12:02 PM May 05, 2024 | Team Udayavani |

ನೆಲಮಂಗಲ: ತಾಲೂಕಿನ ಸೋಂಪುರ ಹೋಬಳಿ ಗೊಟ್ಟಿಕೆರೆ ಪಾಳ್ಯದಲ್ಲಿ ಪತಿಯೇ ಪತ್ನಿಯನ್ನು ಹತ್ಯೆಗೈದಿರುವ ಘಟನೆ ನಡೆದಿದೆ .

Advertisement

ಜಯಲಕ್ಷ್ಮೀ (36) ಎಂಬುವವರೆ ಹತ್ಯೆಗೊಳಗಾದ ಮಹಿಳೆ. ಪತ್ನಿಯನ್ನು ಹತ್ಯೆಗೈದ ಆರೋಪದಲ್ಲಿ ಪತಿ ಶ್ರೀನಿವಾಸ್‌ (42) ಎಂಬಾತನನ್ನು  ದಾಬಸ್‌ಪೇಟೆ ಠಾಣೆ ಪೊಲೀಸರು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.

ಗೊಟ್ಟಿಕೆರೆ ಪಾಳ್ಯದ ಶ್ರೀನಿವಾಸ್‌ ಅವರ ಜಮೀನು ಸ್ವಾಧೀನ ಪಡೆದಿದ್ದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಸುಮಾರು 1 ಕೋಟಿ ಪರಿಹಾರ ಮಂಜೂರು ಮಾಡಿತ್ತು. ಇದೇ ಹಣವನ್ನು ಜಯಲಕ್ಷ್ಮೀ ಅವರು ಪತಿ ಶ್ರೀನಿವಾಸನಿಗೆ ತಿಳಿಯದಂತೆ ತನ್ನ ತವರು ಮನೆಗೆ ನೀಡಿದ್ದರೆಂದು ಗೊತ್ತಾಗಿದೆ. ಇದೇ ಕಾರಣಕ್ಕೆ ಆರೋಪಿ ಕೊಲೆ ಮಾಡಿರುವುದು ಮೇಲ್ನೋಟಕ್ಕೆ ತಿಳಿದುಬಂದಿದೆ  ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next