Advertisement

ಘಟಪ್ರಭಾ ನದಿಯ ನೀರು ಪಾಲದ ಯುವಕನ ಮೃತ ದೇಹ ಪತ್ತೆ

06:40 PM Oct 09, 2021 | Team Udayavani |

ಮೂಡಲಗಿ(ಬೆಳಗಾವಿ ಜಿಲ್ಲೆ): ತಾಲೂಕಿನ ಕಮಲದಿನ್ನಿ ಹತ್ತಿರ ಘಟಪ್ರಭಾ ನದಿಯಲ್ಲಿ ಕಳೆದ ಗುರುವಾಸಂಜೆ  ಮೀನು ಹಿಡಿಯಲು ತಂದೆಯೊಂದಿಗೆ ತೆರಳಿದ್ದ ವಿದ್ಯಾರ್ಥಿ ನದಿ ನೀರಿನ ಪಾಲಾದ ಯುವಕನ ಮೃತ ದೇಹ ಶನಿವಾರ ಮಧ್ಯಹ್ನ  ಪತ್ತೆಯಾಗಿದೆ.

Advertisement

ಯುವಕನ ಪತ್ತೆಗಾಗಿ ಎಸ್‍ಡಿಆರ್‍ಎಫ್ ತಂಡ ನಿರಂತರ ಕಾರ್ಯಾಚರಣೆಯಲ್ಲಿ ಶನಿವಾರ ಮದ್ಯಾಹ್ನ ಕಮಲದಿನ್ನಿ ಗ್ರಾಮದ ಉದಯ ಪರಿಶುರಾಮ ಹಾದಿಮನಿ (17) ವಿದ್ಯಾರ್ಥಿಯ ಮೃತದೇಹ ತಾಲೂಕಿನ ಮುನ್ಯಾಳ ಸೇತುವೆ ಕೆಳಗೆ ಪತ್ತೆಯಾಗಿದ್ದು, ಎಸ್‍ಡಿಆರ್‍ಎಫ್ ತಂಡದ ಸಿಬ್ಬಂದಿಗಳು ಮೃತದೇಹವನ್ನು ಬೋಟ್‍ದಲ್ಲಿ ಹಾಕಿಕೊಂಡು ನದಿಯ ದಡಕ್ಕೆ ತಂದು ಪೊಲೀಸ್ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.

ಯುವಕನ ಮೃತದೇಹ ಪತ್ತೆಯಾದ ಹಿನ್ನೆಲೆ ಯುವಕ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಘಟನಾ ಸ್ಥಳದಲ್ಲಿ ಬೆಳಗಾವಿ ಎಸ್‍ಡಿಆರ್‍ಎಫ್ ಅಧಿಕಾರಿ ಸಂಗಪ್ಪ ತೋಳಮಟ್ಟಿ ಮತ್ತು ಗೋಕಾಕ ಅಗ್ನಿಶಾಮದಳ ಸಹಾಯಕ ಅಧಿಕಾರಿ ಸದಾನಂದ ಮಳವೆಂಕಿ ನೇತೃತ್ವದ ತಂಡದ ಹಾಗೂ ಮೂಡಲಗಿ ತಾಲೂಕಾ ಆಡಳಿ ಹಾಗೂ ಮೂಡಲಗಿ ಪಿಎಸ್‍ಐ ಎಚ್ ವೈ ಬಾಲದಂಡಿ, ಕುಲಗೋಡ ಪಿಎಸ್‍ಐ ಹಣಮಂತ ನಿರಳೆ, ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಭಾರತಿ ಕೋಣಿ, ಮುನ್ಯಾಳ ಗ್ರಾ.ಪಂ ಜನ ಪ್ರತಿನಿಧಿಗಳು, ಸಿಬ್ಬಂದಿಮತ್ತು ಪೊಲೀಸ್ ಸಿಬ್ಬಂದಿಗಳು ಇದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next