Advertisement
ಮಂಡ್ಯ: ಕುಡಿದ ಅಮಲಿನಲ್ಲಿದ್ದ ಅಳಿಯನೊಬ್ಬ ತನ್ನ ಮಾವನನ್ನು ನಡುಬೀದಿಯಲ್ಲಿ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಭೀಕರ ಘಟನೆ ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.
Related Articles
Advertisement
ತೀವ್ರ ಕುಡಿತದ ಚಟ ಹೊಂದಿದ್ದ ರಘು ಜತೆ ಸಂಸಾರ ಮಾಡಲು ಕಷ್ಟ ಎಂದು ಆತನ ಹೆಂಡತಿ ಕೆಲ ದಿನಗಳ ಹಿಂದೆ ತನ್ನ ಇಬ್ಬರು ಮಕ್ಕಳೊಂದಿಗೆ ತವರಿಗೆ ಬಂದಿದ್ದಳು. ಹೆಂಡತಿಯನ್ನು ವಾಪಸ್ ಕಳುಹಿಸಿ ಎಂದು ರಘು, ಮಾವ ಸುರೇಶ್ನನ್ನು ಹಲವಾರು ಬಾರಿ ಕೇಳಿಕೊಂಡಿದ್ದಾನೆ. ಸುರೇಶ್ ಮಗಳನ್ನು ಕಳುಹಿಸಿರಲಿಲ್ಲ. ಇದರಿಂದ ಬೇಸತ್ತ ರಘು, ಗುರುವಾರ ರಾತ್ರಿ ಚಿನಕುರಳಿ ಗ್ರಾಮದ ಟೀ ಅಂಗಡಿಯಲ್ಲಿ ಸುರೇಶ್ ಟೀ ಕುಡಿಯುತ್ತಿದ್ದ ವೇಳೆ ಕೊಡಲಿಯಿಂದ ಮಾವನ ತಲೆ ಮತ್ತು ಹೊಟ್ಟೆಗೆ ಹೊಡೆದಿದ್ದಾನೆ. ಈ ವೇಳೆ ಸುರೇಶ್ಗೆ ತೀವ್ರ ರಕ್ತಸ್ರಾವವಾಗಿ ಆತ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ಪಾoಡವಪುರ ಪೊಲೀಸರು ರಘು ಅಲಿಯಾಸ್ ಜಿಮ್ಮಿ ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.