Advertisement

ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ವಾಹನ ಢಿಕ್ಕಿ: ಯುವಕ ಸಾವು

11:48 AM Oct 20, 2021 | Team Udayavani |

ಮದ್ದೂರು: ರಸ್ತೆ ದಾಟುತ್ತಿದ್ದ ವ್ಯಕ್ತಿಯೋರ್ವನಿಗೆ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ  ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲ್ಲೂಕಿನ  ಬೋರಾಪುರ  ಗ್ರಾಮದಲ್ಲಿ ಮಂಗಳವಾರ ರಾತ್ರಿ ಜರುಗಿದೆ.

Advertisement

ಬೋರಾಪುರ ಗ್ರಾಮದ ಸಿದ್ದರಾಮು ಅವರ ಪುತ್ರ  ಮದನ್( 19) ಮೃತಪಟ್ಟ ಯುವಕನಾಗಿದ್ದಾನೆ.

ಮೃತ ಯುವಕ ಮದನ್ ಬೋರಾಪುರ ಗೇಟ್ ನಲ್ಲಿ ರಸ್ತೆ ಬದಿಯಿಂದ ಮತ್ತೊಂದು ರಸ್ತೆ ಬದಿಗೆ ದಾಟುತ್ತಿದ್ದ ವೇಳೆ  ಮಳವಳ್ಳಿ ಕಡೆಯಿಂದ ಬಂದ ಬುಲೋರೋ ವಾಹನ  ಯುವಕನಿಗೆ ಡಿಕ್ಕಿಯೊಡೆದ ಪರಿಣಾಮ      ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ

ಈ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತಾಲ್ಲೂಕು ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿದ ಬಳಿಕ ವಾರಸುದಾರರಿಗೆ ಒಪ್ಪಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next