Advertisement

ಕುಷ್ಟಗಿ: ಹಾಡಹಗಲೇ ಜೆಸಿಬಿ ಬಿಡಿಭಾಗವನ್ನು ಹೊತ್ತೊಯ್ದ ಕಳ್ಳರು

12:20 PM Dec 22, 2021 | Team Udayavani |

ಕುಷ್ಟಗಿ: ಕುಷ್ಟಗಿ ಪಟ್ಟಣದ 1ನೇ ವಾರ್ಡಿನ ಕೃಷ್ಣಗಿರಿ ಕಾಲೋನಿಯಲ್ಲಿ ಹಾಡ ಹಗಲೇ  ಜೆಸಿಬಿಯ ಭಾರವಾದ ಬಿಡಿಭಾಗವನ್ನು ಹೊತ್ತೊಯ್ದಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

Advertisement

ಕಳೆದ ಡಿ.5ರಂದು ‌ಮಾಜಿ ಪುರಸಭೆ ಸದಸ್ಯ ನಾಗರಾಜ ಮೇಲಿನಮನಿ ಅವರ‌ ಮನೆ ಎದುರಿನ ಬಯಲು ಜಾಗೆಯಲ್ಲಿ ಶರಣಪ್ಪ ಬಿಜಕಲ್ ಎಂಬುವರು ಜೆಸಿಬಿ ನಿಲ್ಲಿಸುತ್ತಿದ್ದರು. ಜೆಸಿಬಿಯ ಎರಡು ಸಣ್ಣ ಬಿಡಿಭಾಗವನ್ನು ಅಲ್ಲಿಯೇ ಇರಿಸಿದ್ದರು. ಇದರ ಮೇಲೆ ಕಣ್ಣಿಟ್ಟಿದ್ದ ಇಬ್ಬರು  ಬೈಕಿನಲ್ಲಿ  ಬಂದು ಭಾರವಾದ ಬಿಡಿಭಾಗವನ್ನು ಹೊತ್ತೊಯ್ದಿದ್ದಾರೆ.

ಈ ಕಳ್ಳರು ಬೈಕಿನಲ್ಲಿ ಹೊತ್ತೊಯ್ಯುವ ದೃಶ್ಯಾವಳಿಗಳು ಪಕ್ಕದ ಸಿಡಿಪಿಓ ಕಛೇರಿಯ ಸಿಸಿ ಕ್ಯಾಮರಾ ದಲ್ಲಿ ಸೆರೆಯಾಗಿವೆ. ಈ ಪ್ರಕರಣದ ಹಿನ್ನೆಲೆಯಲ್ಲಿ ಜೆಸಿಬಿ ಮಾಲೀಕ ಶರಣಪ್ಪ ಬಿಜಕಲ್ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಸಿಸಿ ಕ್ಯಾಮಾರದಲ್ಲಿ ದೃಶ್ಯಾವಳಿ ಅಸ್ಪಷ್ಟವಾಗಿದ್ದು ಪತ್ತೆ ಕಾರ್ಯಮುಂದುವರೆದಿದೆ. ಸ್ಥಳೀಯ ಹಾಗೂ ಸುತ್ತಮುತ್ತಲಿನ ಗುಜರಿ ಅಂಗಡಿಗಳಲ್ಲಿ ವಿಚಾರಣೆ ನಡೆಸಲಾಗಿದೆ. ಸಿಸಿ ಕ್ಯಾಮರಾ ಸುಳಿವು ನೀಡಿದರೂ ಈ ಚಾಲಕಿ ಕಳ್ಳರ ಸುಳಿವು ಸಿಕ್ಕಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next