Advertisement

ಕೊಪ್ಪ: ಸ್ನಾನಕ್ಕೆ ತೆರಳಿದ್ದ ವ್ಯಕ್ತಿ ನದಿಯಲ್ಲಿ ಮುಳುಗಿ ಸಾವು

04:35 PM Mar 14, 2022 | Team Udayavani |

ಕೊಪ್ಪ: ಸ್ನಾನಕ್ಕೆ  ತೆರಳಿದ್ದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ತಾಲೂಕಿನ ನರಸೀಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾರ್ವೆ ಸಮೀಪದ ತುಂಗಾ‌ ನದಿಯಲ್ಲಿ ಸಂಭವಿಸಿದೆ .

Advertisement

ಇಲ್ಲಿ ನಿರ್ಮಿತ ತೂಗು ಸೇತುವೆ ಬಳಿ ಭಾನುವಾರ ಸ್ನಾನಕ್ಕೆ ತೆರಳಿದ್ದ ಯುವಕ ನೀರಿನಲ್ಲಿ ಮುಳುಗಿ‌ ಸಾವನ್ನಪ್ಪಿದ್ದಾರೆ.

ಸೋಮವಾರ ನದಿಯಲ್ಲಿ ಮೃತ ದೇಹ ತೇಲುತ್ತಿದ್ದು ಸ್ಥಳೀಯರು ಪರಿಶೀಲಿಸಿದಾಗ  ಮೃತ ಯುವಕ  ನಾರ್ವೆ ಗ್ರಾಮದ 29 ವರ್ಷದ ಸುನೀಲ್ ಎಂದು ತಿಳಿದು ಬಂದಿದೆ .

ಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next