Advertisement

ಗುಂಪಿನಿಂದ ಥಳಿತ: ಯುವಕ ಸಾವು

02:17 AM Jan 24, 2021 | Team Udayavani |

ಕಾಸರಗೋಡು: ನಗರದ ಕರಂದಕ್ಕಾಡಿನಲ್ಲಿ ಶನಿವಾರ ಮಧ್ಯಾಹ್ನ ಗುಂಪೊಂದರಿಂದ ಥಳಿತಕ್ಕೆ ಒಳಗಾಗಿ ಗಂಭೀರವಾಗಿ ಗಾಯಗೊಂಡ ಯುವಕ ದೇಳಿ ನಿವಾಸಿ, ಮೂಲತಃ ಚೆಮ್ನಾಡ್‌ ಚಳಿಯಂಗೋಡುವಿನ ರಫೀಕ್‌ (49) ಅವರು ಮೃತಪಟ್ಟಿದ್ದಾರೆ.

Advertisement

ಕರಂದಕ್ಕಾಡು ಅಶ್ವಿ‌ನಿ ನಗರದ ಖಾಸಗಿ ಆಸ್ಪತ್ರೆಯೊಂದರ ಸಮೀಪ ಈ ಘಟನೆ ನಡೆದಿದೆ. ಥಳಿತದಿಂದ ಗಂಭೀರ ಗಾಯಗೊಂಡಿದ್ದ ರಫೀಕ್‌ ಅವರನ್ನು ತತ್‌ಕ್ಷಣ ಕಾಸರಗೋಡು ಜನರಲ್‌ ಆಸ್ಪತ್ರೆಗೆ ಕರೆದೊಯ್ದರೂ ಆ ವೇಳೆಗಾಗಲೆ ಅವರು ಮೃತಪಟ್ಟಿದ್ದರು. ಮಹಿಳೆಯೊಬ್ಬರು ಮಗುವಿನೊಂದಿಗೆ ಆಸ್ಪತ್ರೆಗೆ ಬಂದಿದ್ದರು.

ಈ ಸಮಯದಲ್ಲಿ ರಫೀಕ್‌ ಆ ಮಹಿಳೆಗೆ ಚುಡಾಯಿಸಿ ಕಿರುಕುಳ ನೀಡಲು ಯತ್ನಿಸಿದ್ದ. ಈ ವಿಷಯವನ್ನು ಅವರು ಅಶ್ವಿ‌ನಿ ನಗರದಲ್ಲಿದ್ದ ತನ್ನ ಆಪ್ತರಲ್ಲಿ ಹೇಳಿಕೊಂಡಿದ್ದರು. ಅವರು ತಂಡವಾಗಿ ಬಂದು ರಫೀಕ್‌ ಅವರಿಗೆ ಥಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಮಹಿಳೆಯಿಂದ ಪೊಲೀಸರು ಹೇಳಿಕೆ ಸಂಗ್ರಹಿಸಿದ್ದಾರೆ.

ಥಳಿತದಿಂದಲೇ ಸಾವು ಸಂಭವಿಸಿದೆ ಎಂದು ಹೇಳಲು ಸಾಧ್ಯವಾಗದು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next