Advertisement

ಹುಣಸೂರು : ಸಂಪಿಗೆ ಬಿದ್ದು ಒಂದೂವರೆ ವರ್ಷದ ಕಂದಮ್ಮ ಸಾವು

10:07 PM Jan 19, 2021 | Team Udayavani |

ಹುಣಸೂರು : ನಿರ್ಮಾಣ ಹಂತದಲ್ಲಿದ್ದ ಮನೆ ಮುಂದಿನ ಸಂಪಿಗೆ  ಬಿದ್ದು ಒಂದೂವರೆ ವರ್ಷದ ಪುಟ್ಟ ಮಗು ಸಾವನ್ನಪ್ಪಿರುವ ಮನಕಲಕುವ ಘಟನೆ ತಾಲೂಕಿನ ತೆಂಕಲಕೊಪ್ಪಲಿನಲ್ಲಿ ನಡೆದಿದೆ.

Advertisement

ಮೈಸೂರು ಜಿಲ್ಲೆಯ  ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ತೆಂಕಲಕೊಪ್ಪಲಿನ ನಟರಾಜ್ ಅವರ ಪುತ್ರ ಒಂದೂವರೆ ವರ್ಷದ ದಯಾನಂದ ಸಾವನ್ನಪ್ಪಿದ ದುರ್ದೈವಿ.

ಮನೆ ಮುಂದೆ ತನ್ನ ಅಕ್ಕನೊಂದಿಗೆ ಆಟವಾಡುತ್ತಿದ್ದ ವೇಳೆ ತಮ್ಮನನ್ನು ಅಲ್ಲೇ ಬಿಟ್ಟು  ಅಕ್ಕ ಹೊರಗೆ ಹೋಗಿದ್ದಾಳೆ. ಈ ವೇಳೆ  ಮಗು  ಸಂಪಿಗೆ ಬಿದ್ದಿದ್ದಾನೆ. ಮಗುವನ್ನು ಪೋಷಕರು ಹುಡುಕಿದಾಗ  ಸಂಪಿನಲ್ಲಿ ಬಿದ್ದು ಇಹಲೋಕ ತ್ಯಜಿಸಿತ್ತು.ವಿಷಯ ತಿಳಿದು ಅಕ್ಕಪಕ್ಕದವರು ಆಗಮಿಸಿ ಮಗುವನ್ನು ಸಂಪಿನಿಂದ ಮೇಲೆತ್ತಿದ್ದಾರೆ.

ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next