Advertisement

ನಡುರಸ್ತೆಯಲ್ಲಿ ವಾಹನ ತಡೆದು ಚಾಲಕನನ್ನು ಬೆದರಿಸಿ 30 ಸಾವಿರ ಲೂಟಿ, ಪರಾರಿಯಾದ ಅಪರಿಚಿತರು

03:50 PM Jun 02, 2021 | Team Udayavani |

ನಡುರಸ್ತೆಯಲ್ಲಿ ವಾಹನ ತಡೆದು ಚಾಲಕನನ್ನು ಬೆದರಿಸಿ 30 ಸಾವಿರ ಲೂಟಿ,ಪರಾರಿಯಾದ ಅಪರಿಚಿತರು

Advertisement

ಹುಬ್ಬಳ್ಳಿ: ಬೈಕ್ ನಲ್ಲಿ ಬಂದ ಇಬ್ಬರು ಟಾಟಾ ಏಸ್ ವಾಹನ ತಡೆದು, ಚಾಲಕನನ್ನು ಬೆದರಿಸಿ 30 ಸಾವಿರ ರೂ. ದೋಚಿಕೊಂಡು ಹೋದ ಘಟನೆ ಹಾಡಹಗಲೇ ನಗರದ ಹೊರವಲಯ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ನಡೆದಿದೆ.

ಬುಧವಾರ ಮಧ್ಯಾಹ್ನ ಇಲ್ಲಿನ ಗದಗ ರಸ್ತೆಯ ಐಟಿಸಿ ಗೋದಾಮು ಸಮೀಪ ದಲ್ಲಿ,ಮೋಟಾರು ಬೈಕ್ ನಲ್ಲಿ ಬಂದ ಇಬ್ಬರು, ವಾಹನ ತಡೆದು, ಹಣ ದೋಚಿ ಪರಾರಿಯಾಗಿದ್ದಾರೆ.

ಇದನ್ನೂ ಓದಿ: ನೀರು ಸರಬರಾಜು ಇಳಿಸುವ ವೇಳೆ ಸುಪರ್ ವೈಸರ್ ಮೇಲೆ ಬಿದ್ದ ಪೈಪ್: ಗಾಯಗೊಂಡ ಸುಪರ್ ವೈಸರ್ ಸಾವು

ಬೆಂಡಿಗೇರಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದು, ಸುಲಿಗೆಕೋರರ ಪತ್ತೆ ನಡೆಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next