Advertisement

ಹೆಬ್ರಿ : ಉಪನ್ಯಾಸಕ ನೇಣು ಬಿಗಿದು ಆತ್ಮಹತ್ಯೆ

05:10 PM Jan 01, 2021 | Team Udayavani |

ಹೆಬ್ರಿ :  ಖಾಸಗಿ ಕಾಲೇಜಿನ ಉಪನ್ಯಾಸಕರಾಗಿ ಹೆಬ್ರಿ ಬಡ ಗುಡ್ಡೆ ಬಳಿ  ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದ ವೆಂಕಟೇಶ್ ಎಂಬುವರು ಶುಕ್ರವಾರ ಬೆಳಿಗ್ಗೆ  ಮನೆಯ ಕೊಠಡಿಯ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

Advertisement

ವೆಂಕಟೇಶ್ ಮೂಲತಃ ರೋಣದ ನಿವಾಸಿ. ಶಿರಸಿ ಮೂಲದ  ಯುವತಿಯನ್ನು ಪ್ರೀತಿಸಿ 5 ವರ್ಷದ ಹಿಂದೆ ವಿವಾಹವಾಗಿದ್ದು, ಈ ವಿಷಯ ಯುವತಿ ಮನೆಗೆ ಗೊತ್ತಿಲ್ಲ ಎಂದು ತಿಳಿದು ಬಂದಿದೆ.

ಮೃತ ವೆಂಕಟೇಶ್ ಪತ್ನಿ ಹೆಬ್ರಿಯ ಖಾಸಗಿ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿ ದುಡಿಯುತ್ತಿದ್ದು, ಶುಕ್ರವಾರ ಕಾಲೇಜಿಗೆ ಹಾಜರಾಗಿದ್ದ ವೆಂಕಟೇಶ್ ಬೆಳಿಗ್ಗೆ  ಈಗ ಬರುತ್ತೇನೆ ಎಂದು ಮನೆಗೆ ಹೋಗಿ ಹೆಂಡತಿಗೆ ಕೂಡಲೆ ಬರುವಂತೆ ಮೆಸೇಜ್ ಮಾಡಿದ್ದರು ಎನ್ನಲಾಗಿದೆ. ತರಗತಿಯಲ್ಲಿ ಇದ್ದ ಹೆಂಡತಿ ತಡವಾಗಿ ಮೊಬೈಲ್ ನೋಡಿ ಕೂಡಲೇ ಮನೆಗೆ ಹೋಗಿ ನೋಡುವಾಗ  ಆತ್ಮಹತ್ಯೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

ಇದನ್ನೂ ಓದಿ : ಆತಿಥ್ಯ ಬಡಿಸಿ ನಶಿಸುತ್ತಿರುವ ನಂಜನಗೂಡು ರಸಬಾಳೆ ಉಳಿದೀತೇ?

ವೆಂಕಟೇಶ್ ಈ ಹಿಂದೆ ಮೂಡಬಿದಿರೆಯಲ್ಲಿ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ  ದುಡಿಯುತ್ತಿದ್ದರು. ಆದರೆ   ಲಾಕ್ ಡೌನ್ ಸಮಯದಲ್ಲಿ ಕಳೆದ ಮಾಚ್೯ ನಿಂದ ಕೆಲಸವಿಲ್ಲದೆ ಹೆಬ್ರಿಯ ಬಾಡಿಗೆ  ಮನೆಯಲ್ಲಿದ್ದರು .ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು ಸ್ಥಳಕ್ಕೆ ಹೆಬ್ರಿ ಪೊಲೀಸ್ ಠಾಣಾ ಅಧಿಕಾರಿ  ಹಾಗೂ ಪೊಲೀಸ್ ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ .ಆತ್ಮಹತ್ಯೆಗೆ ಸರಿಯಾದ ಕಾರಣ ತಿಳಿದು ಬಂದಿಲ್ಲ. ಪೊಲೀಸ್ ತನಿಖೆ ಮುಂದುವರಿದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next