Advertisement
ಸಾಮಾನ್ಯವಾಗಿ ಹರಿಹರದಲ್ಲೆ ಕ್ಷೌರ ಮಾಡಿಸುತ್ತಿದ್ದ ಗ್ರಾಮದ ದಲಿತರು ಲಾಕ್ಡೌನ್ ಕಾರಣಕ್ಕೆ ನಗರಕ್ಕೆ ಬರಲಾಗದೆ ಶುಕ್ರವಾರ ಬೆಳಗ್ಗೆ ಸ್ಥಳೀಯ ಅಂಗಡಿಗೆ ತೆರಳಿದ್ದು, ಕ್ಷೌರಿಕ ಅಣ್ಣಪ್ಪ, ನಿಮಗೆ ಕ್ಷೌರ ಮಾಡಿದರೆ ಇತರೆ ಜನಾಂಗದವರು ನನ್ನ ಬಳಿ ಕ್ಷೌರಕ್ಕೆ ಬರುವುದಿಲ್ಲ, ಆದ ಕಾರಣ ನಿಮಗೆ ಕ್ಷೌರ ಮಾಡುವುದಿಲ್ಲ ಎಂದು ಹೇಳಿದ್ದಾರೆ.
Related Articles
Advertisement
ಆಗ ಕ್ಷೌರಿಕ ಅಣ್ಣಪ್ಪ ಹಾಗೂ ಗ್ರಾಮಸ್ಥರು ಇಂತಹ ಘಟನೆ ಪುನರಾವರ್ತನೆಯಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದಾಗ ಪ್ರಕರಣ ಸುಖಾಂತ್ಯ ಕಂಡಿತು. ಲಾಕ್ಡೌನ್ ಮುಗಿದ ನಂತರ ಗ್ರಾಮದಲ್ಲಿ ಶಾಂತಿ ಸಭೆ ನಡೆಸಲಾಗುವುದು ಎಂದು ನಾಸಿರುದ್ದೀನ್ ಗ್ರಾಮಸ್ಥರಿಗೆ ತಿಳಿಸಿದರು.
ದಸಂಸ ತಾಲೂಕು ಸಂಚಾಲಕ ಪಿ.ಜೆ. ಮಹಾಂತೇಶ್, ಪಿಡಿಒ ಮೌನೇಶಾಚಾರ್,ಗ್ರಾಪಂ ಸದಸ್ಯರಾದ ಶಿಲ್ಪಾ ಹುಚ್ಚೆಂಗೆಪ್ಪ, ಮಾಜಿ ಸದಸ್ಯ ಎ.ಪರಶುರಾಮ, ಮಲ್ಲಪ್ಪ ಕೆ., ಮಂಜಪ್ಪಎ., ಶ್ರೀನಿವಾಸ್, ಕಟ್ಟೆಪ್ಪ, ನಿಂಗರಾಜ್, ಅಣ್ಣಪ್ಪ, ಹವಳೆಪ್ಪ, ರೇವಣಪ್ಪ, ಬಸಪ್ಪ, ಕೋಟೆಪ್ಪ ಇತರರು ಇದ್ದರು.
ಕೋವಿಡ್ ಸಂಕಷ್ಟದಲ್ಲೂ ಕೆಲವರು ಮಾನವೀಯತೆ ಮರೆತು, ಜಾತಿ, ಮತಗಳ ಎತ್ತಿಕಟ್ಟಿ ತಾರತಮ್ಯ ಮಾಡುತ್ತಿದ್ದಾರೆ. ಬಹುತೇಕ ಗ್ರಾಮಗಳಲ್ಲಿ ಇಂದಿಗೂ ದೇವಸ್ಥಾನ, ಹೋಟೆಲ್, ಕ್ಷೌರದಂಗಡಿ ದಲಿತರಿಗೆ ನಿಷಿದ್ಧ. ಅಧಿಕಾರಿಗಳು, ಮಠಾ ಧೀಶರು, ಜನಪ್ರತಿನಿಧಿ ಗಳು, ಸಮಾಜ ಸುಧಾರಕರು ಒಟ್ಟಾಗಿ ಅಸ್ಪೃಶ್ಯತೆಗೆ ಕೊನೆ ಹಾಡಬೇಕಿದೆ.– ಪಿ.ಜೆ.ಮಹಾಂತೇಶ್, ದಸಂಸ ತಾಲೂಕು ಸಂಚಾಲಕ.