Advertisement

ಮಗುವನ್ನು ತೊರೆದ ತಾಯಿ ಠಾಣೆಗೆ ಹಾಜರ್‌!

12:03 AM Jan 15, 2021 | Team Udayavani |

ಹಾನಗಲ್ಲ:  ಬಡತನದ ಕಾರಣದಿಂದ 10 ತಿಂಗಳ ಕೂಸೊಂದನ್ನು ಹೆತ್ತ ತಾಯಿಯೇ  ದಾಬಾ ಒಂದರ ಬಳಿ ಬಿಟ್ಟು ಹೋಗಿದ್ದು, ಮರುದಿನ ಆಕೆಯೇ ಮಗುವಿಗಾಗಿ ಪೊಲೀಸ್‌ ಠಾಣೆಗೆ ಆಗಮಿಸಿದ ಕುತೂಹಲಕಾರಿ ಘಟನೆ ನಗರದಲ್ಲಿ ನಡೆದಿದೆ.

Advertisement

ಜ.12ರಂದು ತಾಲೂಕಿನ ನಾಲ್ಕನೇ ಕ್ರಾಸ್‌ ಬಳಿಯ   ದಾಬಾದಲ್ಲಿ  ಮಗುವನ್ನು ತೊರೆದಿದ್ದ ತಾಯಿ ಪಕ್ಕದ ಅಂಗಡಿಯಲ್ಲಿ ಕುಳಿತು ಮಗುವಿನ ಮೇಲೆ ನಿಗಾ ಇಟ್ಟಿದ್ದಳು. ಪೊಲೀಸರು ಆಗಮಿಸಿ ಮಗುವನ್ನು ರಕ್ಷಿಸಿದುದನ್ನು ಕಂಡು ಖುಷಿಯಿಂದ ಮನೆಗೆ ಹೋಗಿದ್ದಳು. ಆದರೆ ರಾತ್ರಿಯಿಡೀ ಪಶ್ಚಾತ್ತಾಪಪಟ್ಟು ಮರುದಿನ ಠಾಣೆಗೆ ಆಗಮಿಸಿ ಮಗು ತನ್ನದೆಂದು ಹೇಳಿದ್ದಾಳೆ. ಪೊಲೀಸರು ವಿಚಾರಿಸಿದಾಗ ಮನೆಯ ಬಡತನ, ಗಂಡನ ಕುಡಿತದಿಂದ ನೊಂದು ಈ ಕೃತ್ಯ ಎಸಗಿದ್ದೇನೆ ಎಂದಿದ್ದಾಳೆ.  ಕೊನೆಗೆ ಮಗುವನ್ನು ಆಕೆಗೆ  ಒಪ್ಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next