Advertisement

ಗಂಗೊಳ್ಳಿ: ಸಾಲ ಮರಳಿ ಕೇಳಿದ್ದಕ್ಕೆ ಹಲ್ಲೆ

07:26 PM Jun 16, 2022 | Team Udayavani |

ಗಂಗೊಳ್ಳಿ: ಉಮಾ ಖಾರ್ವಿ ದೊಡ್ಡಹಿತ್ಲು ಅವರ ಪಕ್ಕದ ಮನೆಯ ಶೋಭಾ ಹಾಗೂ ದೇವದಾಸ ಅವರು ಸಾಲ ಮರಳಿ ಕೇಳಿದ್ದಕ್ಕೆ ಹಲ್ಲೆ ಮಾಡಿದ್ದಾರೆ ಎಂದು ದೂರಲಾಗಿದೆ.

Advertisement

ಉಮಾ ಅವರ ಪುತ್ರಿ ರೇಖಾ ಖಾರ್ವಿ ಅವರ ಬಳಿ ಸಾಲ ನೀಡುವಂತೆ ಕೋರಿಕೊಂಡಂತೆ ಸಂಬಂ ಧಿಕರ ಬಳಿ ಕೈಸಾಲ ಮಾಡಿ ಹಣವನ್ನು ನೀಡಿದ್ದು, ಸಾಲದ ಹಣವನ್ನು ಮರುಪಾವತಿಸುವಂತೆ ಕೇಳಲು ರೇಖಾ ಖಾರ್ವಿ, ಶೋಭಾ ಅವರ ಮನೆಗೆ ಹೋದಾಗ ಶೋಭಾ ಖಾರ್ವಿ, ದೇವದಾಸ ಖಾರ್ವಿ, ಸಂತೋಷ ಖಾರ್ವಿ, ಆಶಾ ಖಾರ್ವಿ, ಕಮಲಾ ಖಾರ್ವಿ ಅವರು ರೇಖಾ ಅವರ ಬಟ್ಟೆ ಎಳೆದು ಹಲ್ಲೆ ಮಾಡಿದ್ದಾರೆ. ಗಲಾಟೆ ಬಿಡಿಸಲು ಹೋದ ಅಜಿತ್‌ ಮೇಲೂ ಹಲ್ಲೆ ನಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ರೇಖಾ ಖಾರ್ವಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next