Advertisement

ಹೊಸ ವರ್ಷದ ಆಚರಣೆ ನೆಪದಲ್ಲಿ ದುಷ್ಕರ್ಮಿಗಳಿಂದ ಬೈಕ್, ಕಾರಿಗೆ ಹಾನಿ

01:51 PM Jan 01, 2023 | Team Udayavani |

ಗಂಗಾವತಿ: ಡಿಸೆಂಬರ್ 31 ರ ರಾತ್ರಿ ಹೊಸ ವರ್ಷದ ಆಚರಣೆಯ ನೆಪದಲ್ಲಿ ದುಷ್ಕರ್ಮಿಗಳು ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ಗಳು ಹಾಗೂ ಕಾರುಗಳಿಗೆ ಬೆಂಕಿ ಹಚ್ಚಿ ಕಲ್ಲಿನಿಂದ ಗಾಜು ಹೊಡೆದು ಹಾಕಿದ ಘಟನೆ ಶನಿವಾರ ಮಧ್ಯೆ ರಾತ್ರಿ ನಡೆದಿದ್ದು, ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಪಂಪಾನಗರದ ಪ್ರಮುಖ ರಸ್ತೆಗಳ ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ಗಳಿಗೆ ಬೆಂಕಿ ಹಚ್ಚಲಾಗಿದ್ದು ಕಾರುಗಳ ಗಾಜು ಹೊಡೆದು ಹಾಕಲಾಗಿದೆ. ಹೊಸ ವರ್ಷದ ಆಚರಣೆ ಸಂದರ್ಭದಲ್ಲಿ ಮಧ್ಯ ರಾತ್ರಿ ಯುವಕರ ಗುಂಪು ಈ ಕೃತ್ಯವೆಸಗಿದ್ದು ಇಲ್ಲಿಯ ಸಿಸಿ ಕ್ಯಾಮರಾಗಳಲ್ಲಿ ರೆಕಾರ್ಡ್ ಆಗಿದೆ.

ನಗರಸಭೆ ಸದಸ್ಯ ವಾಸಿದೇವ ನವಲಿ ದೂರಿನ ಹಿನ್ನೆಲೆಯಲ್ಲಿ ನಗರಠಾಣೆಯ ಪೊಲೀಸರು ಕೇಸ್ ದಾಲಿಸಿಕೊಂಡು ಸಿಸಿ ಕ್ಯಾಮಾರಾ ವಿಡಿಯೋ ಪೋಟೇಜ್ ವೀಕ್ಷಿಸಿ ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next