Advertisement

ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ: ವರದಕ್ಷಿಣೆ ಕಿರುಕುಳದ ಆರೋಪ

06:37 PM Jun 30, 2021 | Team Udayavani |

ದಾವಣಗೆರೆ: ದಾವಣಗೆರೆ ತಾಲೂಕಿನ ಹನುಮನಹಳ್ಳಿಯಲ್ಲಿ  ಮಹಿಳೆಯ ಶವ ನೇಣು ಬಿಗಿದ ರೀತಿಯಲ್ಲಿ ಪತ್ತೆಯಾಗಿದೆ. ವರದಕ್ಷಿಣೆ, ಮಾನಸಿಕ ಕಿರುಕುಳದ ಆರೋಪ ಕೇಳಿ ಬಂದಿದೆ.

Advertisement

ದಾವಣಗೆರೆ ತಾಲೂಕಿನ ಹೊಸ ಕುಂದುವಾಡ ಗ್ರಾಮದ ರೂಪಾ(26) ಎಂಬುವರ ವಿವಾಹ ಹನುಮನಹಳ್ಳಿಯ ಜಯಪ್ರಕಾಶ್ ಎಂಬಾತನೊಂದಿಗೆ ಆರು ತಿಂಗಳ ನೆರವೇರಿತ್ತು.  ವಿವಾಹ ಸಂದರ್ಭದಲ್ಲಿ  ಒಂಭತ್ತು ತೊಲೆ ಬಂಗಾರ, 1.5 ಲಕ್ಷ ರೂ. ನಗದು ನೀಡಲಾಗಿತ್ತು. ಆದರೂ ಪತಿ ಜಯಪ್ರಕಾಶ್ ಮತ್ತು ಕುಟುಂಬದವರು ಹೆಚ್ಚಿನ ವರದಕ್ಷಿಣೆ ತರುವಂತೆ ರೂಪಾಗೆ ಕಿರುಕುಳ ನೀಡುತ್ತಿದ್ದರು.

ಇದನ್ನೂ ಓದಿ: ಚಿಕ್ಕಮಗಳೂರು : ಅಕ್ರಮ ಸಂಬಂಧವನ್ನು ಪ್ರಶ್ನಿಸಿದ್ದಕ್ಕೆ ಪತ್ನಿಯನ್ನೇ ಕೊಂದ ಪತಿ

ತವರು ಮನೆಯವರೊಂದಿಗೆ ಮಾತನಾಡದಂತೆ ಮೊಬೈಲ್ ಕಿತ್ತುಕೊಂಡಿದ್ದರು. ಮೊಬೈಲ್‌ಗೆ ಬರುತ್ತಿದ್ದ ಕರೆಗಳ ಬಗ್ಗೆ ಪತಿ ಸಂಶಯ ಪಡುತ್ತಿದ್ದನು. ವರದಕ್ಷಿಣೆಗಾಗಿ ಮನೆಯವರೇ ಮಗಳನ್ನು ಹೊಡೆದು ನಂತರ ನೇಣು ಹಾಕಿದ್ದಾರೆ ಎಂದು ಮೃತ ರೂಪಾ ಕುಟುಂಬದವರು ಮಾಯಕೊಂಡ ಪೊಲೀಸ್ ಠಾಣೆಯಲ್ಲಿ  ದೂರು ದಾಖಲಿಸಿದ್ದಾರೆ. ಜಯಪ್ರಕಾಶ್ ಹಾಗೂ ಅವರ ಕುಟುಂಬದವರು ತಲೆಮರೆಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next