Advertisement

ಪುತ್ರಿಯನ್ನು ನೀರಿನ ಟಬ್‌ನಲ್ಲಿ ಮುಳುಗಿಸಿ ಕೊಂದು, ಆತ್ಮಹತ್ಯಗೆ ಯತ್ನಿಸಿದ ತಾಯಿ

02:49 PM Aug 23, 2022 | Team Udayavani |

ಬೆಂಗಳೂರು: ಮಹಿಳೆಯೊಬ್ಬರು ತನ್ನ 3 ವರ್ಷದ ಮಗುವನ್ನು ನೀರಿನ ಟಬ್‌ನಲ್ಲಿ ಮುಳುಗಿಸಿ ಕೊಂದು, ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಎಚ್‌ಎಎಲ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ದೊಡ್ಡನೆಕುಂದಿಯ ಗುರುರಾಜ ಲೇಔಟ್‌ನ ಸಂಯುಕ್ತ (3) ಹತ್ಯೆಗೀಡಾದ ಮಗು. ಗಾಯಿತ್ರಿದೇವಿ (24) ಮಗುವನ್ನು ಕೊಂದ ತಾಯಿ.

ತಮಿಳುನಾಡು ಮೂಲದ ನರೇಂದ್ರನ್‌ 5 ವರ್ಷದ ಹಿಂದೆ ಗಾಯಿತ್ರಿದೇವಿಯನ್ನು ಮದುವೆಯಾಗಿದ್ದು, ದೊಡ್ಡನೆಕುಂದಿಯಲ್ಲಿ ವಾಸವಾಗಿದ್ದಾರೆ. ಖಾಸಗಿ ಕಂಪನಿಯಲ್ಲಿ ಅಕೌಂಟೆಂಟ್‌ ಆಗಿರುವ ನರೇಂದ್ರನ್‌, ಶನಿವಾರ ಕಾರ್ಯ ನಿಮಿತ್ತ ತಮಿಳುನಾಡಿಗೆ ಹೋಗಿದ್ದರು. ಭಾನುವಾರ ನಸುಕಿನ 4 ಗಂಟೆ ಸುಮಾರಿಗೆ ನರೇಂದ್ರನ್‌ ತಮಿಳುನಾಡಿನಿಂದ ವಾಪಸ್‌ ಮನೆಗೆ ಬಂದಾಗ ಮಗಳು ಸಂಯುಕ್ತ ನೀರಿನ ಟಬ್‌ನಲ್ಲಿ ಮುಳುಗಿ ಮೃತಪಟ್ಟಿರುವುದು ಗೊತ್ತಾಗಿದೆ.

ಇದನ್ನೂ ಓದಿ: ಬಟ್ಟೆ ತರಲು ಅಂಗಡಿಗೆ ಕರೆದೊಯ್ಯದಿದ್ದಕ್ಕೆ ಬಾಲಕಿ ಆತ್ಮಹತ್ಯೆ

ಬಳಿಕ ರೂಮ್‌ಗೆ ತೆರಳಿ ನೋಡಿದಾಗ ಪತ್ನಿ ಗಾಯಿತ್ರಿದೇವಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಕೂಡಲೇ ಆಕೆಯನ್ನು ಕೆಳಗೆ ಇಳಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸದ್ಯ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Advertisement

ಮಾನಸಿಕ ಖಿನ್ನತೆ: ಗಾಯಿತ್ರಿದೇವಿ ಕೆಲ ದಿನಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಳು. ಈ ಹಿನ್ನೆಲೆ ಕೃತ್ಯ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಎಚ್‌ಎಎಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next