Advertisement

ಸಕಾಲಕ್ಕೆ ಹಣ ಹಿಂದಿರುಗಿಸದ್ದಕ್ಕೆ ಮಹಿಳೆಯ ಕೊಲೆ

11:26 AM Mar 01, 2021 | Team Udayavani |

ಬೆಂಗಳೂರು: ಹಾಡುಹಗಲೇ ವ್ಯಕ್ತಿಯೊಬ್ಬ ಹಣಕಾಸಿನ ವಿಚಾರಕ್ಕೆ ಮಹಿಳೆಯನ್ನು ನಡುರಸ್ತೆಯಲ್ಲೇ ಕತ್ತು ಕೊಯ್ದು ಭೀಕರವಾಗಿ ಹತ್ಯೆಗೈದಿರುವ ಘಟನೆ ಎಚ್‌ಎಎಲ್‌ ಠಾಣಾ ವ್ಯಾಪ್ತಿ ಭಾನುವಾರ ಬೆಳಗ್ಗೆ ನಡೆದಿದೆ.

Advertisement

ಕುಂದಲಹಳ್ಳಿ ನಿವಾಸಿ ಆಲಿಂ ಬೇಬಿ(32) ಕೊಲೆಯಾದ ಮಹಿಳೆ. ಕೃತ್ಯ ಎಸಗಿದ ರಫೀಕ್‌ ಶೇಖ್‌ ಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

ಪಶ್ಚಿಮ ಬಂಗಾಳ ಮೂಲದ ಆಲೀಂ ಬೇಬಿ ಮತ್ತು ರಫೀಕ್‌ ಶೇಖ್‌ ಹಲವು ತಿಂಗಳ ಹಿಂದೆಯೇ ಬೆಂಗಳೂರಿಗೆ ಬಂದಿದ್ದು, ಕುಂದಲಹಳ್ಳಿಯ ಶೆಡ್‌ನಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದರು. ಇಬ್ಬರು ಅಕ್ಕ- ಪಕ್ಕದ ನಿವಾಸಿಗಳಾಗಿದ್ದಾರೆ. ಆಲೀಂ ಬೇಬಿ ಮನೆ ಕೆಲಸ ಮತ್ತು ಅಡುಗೆ ಕೆಲಸಕ್ಕೆ ಹೋಗುತ್ತಿದ್ದರು. ಆರೋಪಿ ರಫೀಕ್‌ ಶೇಖ್‌, ಸೀರೆ ವ್ಯಾಪಾರ ಮಾಡಿಕೊಂಡಿದ್ದ. ಕೆಲ ತಿಂಗಳ ಹಿಂದೆ ಆಲೀಂ ಬೇಬಿ, ರಫೀಕ್‌ಶೇಖ್‌ನಿಂದ ಹತ್ತು ಸಾವಿರ ರೂ. ಪಡೆದುಕೊಂಡಿದ್ದಳು. ಆದರೆ, ಸರಿಯಾದ ಸಮಯಕ್ಕೆ ಹಿಂದಿರುಗಿಸಿರಲಿಲ್ಲ. ಅದೇ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿತ್ತು. 15 ದಿನಗಳ ಹಿಂದೆ ಆಕೆಯ ಶೆಡ್‌ ಬಳಿ ಬಂದಿದ್ದ ರಫೀಕ್‌, ಹಣ ವಾಪಸ್‌ ಕೊಡುವಂತೆ ಜಗಳ ತೆಗೆದಿದ್ದ. ಇಬ್ಬರ ನಡುವೆ ದೊಡ್ಡವಾಗಿ ವಾಗ್ವಾದ ನಡೆದಿತ್ತು. ಕುಪಿತನಾದ ಆರೋಪಿ, ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಎಂದು ಪೊಲೀಸರು ಹೇಳಿದರು.

ಭೀಕರ ಕೊಲೆ :

ಭಾನುವಾರ ಬೆಳಗ್ಗೆ ಆಲೀಂ ಬೇಬಿ ಎಂದಿನಂತೆ ಐಟಿಪಿಎಲ್‌ ಮುಖ್ಯ ರಸ್ತೆ ಟೆಕ್‌ಪಾರ್ಕ್‌ ಬಳಿ ಮನೆ ಕೆಲಸಕ್ಕೆ ನಡೆದುಕೊಂಡು ಹೋಗುತ್ತಿದ್ದಳು. ಅದೇ ವೇಳೆ ಎದುರಿಗೆ ಬಂದ ಆರೋಪಿ, ಅಡ್ಡಹಾಕಿ ಚಾಕುವಿನಿಂದ ಏಕಾಏಕಿ ಆಕೆಯ ಕುತ್ತಿಗೆಗೆ ಇರಿದು ಪರಾರಿಯಾಗಿದ್ದಾನೆ. ಆಕೆ ಸ್ಥಳದಲ್ಲೇ ಮೃತಳಾಗಿದ್ದಾಳೆ. ಸ್ಥಳೀಯರು ಪೊಲೀಸರಿಗೆ ಮಾಹಿತಿಮುಟ್ಟಿಸಿದ್ದು, ಸ್ಥಳಕ್ಕೆ ಬಂದ ಪೊಲೀಸರುಮೃತದೇಹವನ್ನು ಮರಣೋತ್ತರಪರೀಕ್ಷೆಗೆ ಕಳುಹಿಸಿದ್ದಾರೆ. ಆರೋಪಿಯಪತ್ತೆಗಾಗಿ ಡಿಸಿಪಿ ಡಿ.ದೇವರಾಜ್‌ಎಚ್‌ಎಎಲ್‌ ಇನ್‌ಸ್ಪೆಕ್ಟರ್‌ ನೇತೃತ್ವದಲ್ಲಿತಂಡ ರಚಿಸಿದ್ದಾರೆ. ಪ್ರಕರಣ ಎಚ್‌ಎಎಲ್‌ ಠಾಣೆಯಲ್ಲಿ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next