Advertisement

ತಂದೆಯನ್ನೇ ಹೊಡೆದು ಕೊಲೆಗೈದ ಪುತ್ರ

02:19 AM Jan 19, 2021 | Team Udayavani |

ಬೆಳ್ತಂಗಡಿ: ತಾನು ಪ್ರೀತಿಸಿದ್ದ ಹುಡುಗಿಯೊಂದಿಗೆ ವಿವಾಹವಾಗಿ ಮನೆಗೆ ಬಂದಾಗ ತಂದೆ ಅಸಮಾಧಾನ ಗೊಂಡು ಜಗಳವಾಡಿದ್ದಲ್ಲದೆ ಸೊಸೆಯನ್ನು ಒಪ್ಪಿಕೊಳ್ಳದೇ ಹೋದಾಗ ಪುತ್ರ ತನ್ನ ತಂದೆಯನ್ನು ಹೊಡೆದು ಕೊಲೆಗೈದ ಘಟನೆ ಸೋಮವಾರ ಗರ್ಡಾಡಿ ಸಮೀಪ ನಡೆದಿದೆ.

Advertisement

ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ಮುಂಡ್ಯೊಟ್ಟು ನಿವಾಸಿ ಶ್ರೀಧರ ಪೂಜಾರಿ (55) ಅವರನ್ನು ಅವರ ಪುತ್ರ ಹರೀಶ ( 27) ಕೊಲೆಗೈದಿದ್ದಾನೆ. ಮೃತ ಶ್ರೀಧರ  ಅವರು ಪತ್ನಿ, ಇಬ್ಬರು ಪುತ್ರರು ಮತ್ತು ಪುತ್ರಿಯನ್ನು ಅಗಲಿದ್ದಾರೆ.

ಹರೀಶ ಬೆಂಗಳೂರಿನಲ್ಲಿ ಕಟ್ಟಡ ಕಾರ್ಮಿಕನಾಗಿ ಕೆಲಸದಲ್ಲಿದ್ದು, ಬೆಂಗಳೂರಿ ನಲ್ಲಿ ತಾನು ಪ್ರೀತಿಸಿದ್ದ ಯುವತಿ ಜತೆ ವಿವಾಹವಾಗಿದ್ದ. ಕಳೆದ 27 ದಿನಗಳ ಹಿಂದೆ ಪತ್ನಿ ಜತೆ ಊರಿಗೆ ಬಂದು ನೆಲೆಸಿದ್ದ. ಆದರೆ ಅನ್ಯಜಾತಿಯ ಯುವತಿಯನ್ನು ಮನೆ ಮಂದಿ ಒಪ್ಪಿಗೆ ಇಲ್ಲದೆ ವಿವಾಹವಾಗಿರುವ ಕುರಿತು ತಂದೆ ಶ್ರೀಧರ ಪೂಜಾರಿ ಬೇಸರಗೊಂಡಿದ್ದರು ಎನ್ನಲಾಗಿದೆ. ಇದೇ ವಿಚಾರಕ್ಕೆ ಪ್ರತಿನಿತ್ಯ ತಂದೆ ಮಗನ ಮಧ್ಯೆ ಜಗಳವಾಗುತ್ತಿತ್ತು. ಸೋಮವಾರ ಕುಡಿದ ಮತ್ತಿನಲ್ಲಿ ಹರೀಶ ಕಟ್ಟಿಗೆ ತುಂಡಿನಿಂದ ಹಲ್ಲೆ ನಡೆಸಿದ್ದಾನೆ. ತಲೆಗೆ ಬಿದ್ದ ಏಟಿನಿಂದಶ್ರೀಧರ ಪೂಜಾರಿ ಅಸುನೀಗಿರುವುದಾಗಿ ಪೊಲೀಸ್‌ ಅಧಿಕಾರಿಗಳು  ಖಚಿತಪಡಿಸಿದ್ದಾರೆ.

ಘಟನಾ ಸ್ಥಳಕ್ಕೆ ಬೆಳ್ತಂಗಡಿ ವೃತ್ತನಿರೀಕ್ಷಕ ಸಂದೇಶ್‌ ಪಿ.ಜಿ ಮತ್ತು ಸಿಬಂದಿ ಧಾವಿಸಿದ್ದು ಸ್ಥಳ ಮಹಜರು ನಡೆಸಿ ಕೃತ್ಯವೆಸಗಿದ ಮಗನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next