Advertisement

ಅನೈತಿಕ ಸಂಬಂಧ: ಪ್ರಿಯಕರನ ಸಹಾಯದಿಂದ ಪತಿಯ ಹತ್ಯೆ

11:29 PM Aug 01, 2021 | Team Udayavani |

ಚಂದ್ರಾಪುರ: ಅನೈತಿಕ ಸಂಬಂಧದಿಂದಾಗಿ ಪತ್ನಿ ತನ್ನ ಪತಿಯನ್ನೇ ತನ್ನ ಪ್ರಿಯಕರನ ಸಹಾಯದಿಂದ ಹತ್ಯೆಗೈದ ಘಟನೆ ಬಲ್ಲಾರಪುರದಲ್ಲಿ  ಸಂಭವಿಸಿದೆ.

Advertisement

ಮೃತನನ್ನು ಮಾರೋತಿ ಕಾಕ್ಡೆ ಎಂದು ಗುರುತಿಸಲಾಗಿದೆ.ಮೃತನ ಪತ್ನಿ ಪ್ರಾಜಕ್ತಾ ಕಾಕ್ಡೆ, ಮೃತನ ಅತ್ತೆ ಕಾಂತಾ ದೇವಾನಂದ್‌ ಭಾಸಖೇತ್ರೆ, ಪ್ರಿಯಕರ ಸಂಜಯ್‌ ಮಾರೋತಿ ಟಿಕ್ಲೆ ಮತ್ತು ವಿಕಾಸ್‌ ಭಾಸ್ಕರ್‌ ನಾಗರಾಳೆಯನ್ನು ಬಲ್ಲಾರಪುರ ಪೊಲೀಸರು ಬಂಧಿಸಿದ್ದಾರೆ.

ಮಾರೋತಿ ಶಂಕರ್‌ ಕಾಕ್ಡೆ ಅವರ ಮೃತದೇಹ ಬಲ್ಲಾರಪುರದ ಸಸ್ತಿ ಸೇತುವೆ ಬಳಿ ಪತ್ತೆಯಾಗಿದೆ. ದೇಹದ ಮೇಲೆ ಹರಿತವಾದ ಆಯುಧದಿಂದ ಇರಿದ ಗುರುತುಗಳಿದ್ದವು. ಈ ಘಟನೆಯ ಬಗ್ಗೆ ಬಲ್ಲಾರಪುರ ಪೊಲೀಸರು ತನಿಖೆ ನಡೆಸಿದಾಗ ಮೃತ ಮಾರೋತಿ ಕಾಕ್ಡೆ ಅವರ ಪತ್ನಿ ಪ್ರಾಜಕ್ತಾ ಕಾಕ್ಡೆ ಮತ್ತು ಸಂಜಯ್‌ ಟಿಕ್ಲೆ ನಡುವೆ ಅನೈತಿಕ ಸಂಬಂಧ ಹೊಂದಿದ್ದು, ಈ ಸಂಬಂಧದ ಬಗ್ಗೆ ಮಾರೋತಿಗೆ ತಿಳಿದಾಗ ಆತನ ಹತ್ಯೆಗೈಯಲು ಸಂಚು ಮಾಡಿರುವುದು ತಿಳಿದುಬಂದಿದೆ. ಮಾರೋತಿ ಮರಣದ ಬಳಿಕ ಪತಿಯ ಕೆಲಸ ಪ್ರಾಜಕ್ತಾಳಿಗೆ ದೊರೆಯುವುದು ಮತ್ತು ಸಂಜಯ್‌ ಹಾಗೂ ಪ್ರಾಜಕ್ತಾ ಮದುವೆಯಾಗಲು ನಿರ್ಧರಿಸಿದ್ದರು.

ಎಸಿಸಿ ಸಿಮೆಂಟ್‌ ಕಂಪೆನಿಯ ಬಳಿ ಮಾರೋತಿಯನ್ನು ಕರೆದ ಸಂಜಯ್‌ ತನ್ನ ಸ್ನೇಹಿತನ ಸಹಾಯದಿಂದ ನಾಲಾದಲ್ಲಿ ಮುಳುಗಿಸಿ ಹರಿತವಾದ ಆಯುಧದಿಂದ ಹತ್ಯೆಗೈದು ಶವವನ್ನು ಸಸ್ತಿ ಸೇತುವೆ ಬಳಿ ಎಸೆದಿದ್ದ. ಈ ಹತ್ಯೆ ಪ್ರಕರಣದಲ್ಲಿ ಪ್ರಾಜಕ್ತಾಳನ್ನು ಪೊಲೀಸರು ಪ್ರಶ್ನಿಸಿದಾಗ ಅಸ್ಪಷ್ಟ ಉತ್ತರಗಳನ್ನು ನೀಡಿದ್ದಳು. ಸಂಶಯಗೊಂಡ ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ಆಕೆ ತನ್ನ ಪ್ರಿಯಕರನ ಸಹಾಯದಿಂದ ಪತಿಯನ್ನು ಹತ್ಯೆಗೈದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ.

Advertisement

Udayavani is now on Telegram. Click here to join our channel and stay updated with the latest news.

Next