Advertisement

ಅಂಕೋಲಾ : ದೋಣಿ ಹತ್ತುವಾಗ ಆಯತಪ್ಪಿ ಬಿದ್ದ ವ್ಯಕ್ತಿ, ಸಮುದ್ರದಲ್ಲಿ ಮುಳುಗಿ ವ್ಯಕ್ತಿ ಸಾವು

06:01 PM Mar 23, 2022 | Team Udayavani |

ಅಂಕೋಲಾ : ಸಮುದ್ರಕ್ಕೆ ಮೀನುಗಾರಿಕೆಗೆ ತೆರಳುವ ಸಂದರ್ಭದಲ್ಲಿ ದೋಣಿ ಹತ್ತುವಾಗ ಆಯತಪ್ಪಿ ಕಾಲು ಜಾರಿ ಸಮುದ್ರಕ್ಕೆ ಬಿದ್ದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ತಾಲೂಕಿನ ಹಾರವಾಡಾ ಸಮುದ್ರ ತೀರದಲ್ಲಿ ನಡೆದಿದೆ.

Advertisement

ಹಾರವಾಡ ಸೀಬರ್ಡ್ ಕಾಲೋನಿ ನಿವಾಸಿ ಸಾಯಿನಾಥ ಬೋಳಾ ದುರ್ಗೇಕರ, (47) ಮೃತ ದುರ್ಧೈವಿ.

ಈತನು ತನ್ನ  ಶ್ರೀ ಆರ್ಯದುರ್ಗಾ ಮೀನುಗಾರಿಕಾ ದೋಣಿಯನ್ನು ಸಮುದ್ರದ ನೀರಿಗೆ ದೂಡಿದ ನಂತರ ದೋಣಿಯನ್ನು ಹತ್ತುವ ಸಂದರ್ಭದಲ್ಲಿ ಆಯತಪ್ಪಿ ಕಾಲು ಜಾರಿ ಸಮುದ್ರಕ್ಕೆ ಬಿದ್ದು ಮೃತಪಟ್ಟಿದ್ದಾನೆ.

ಈ ಕುರಿತು ನಿತ್ಯಾನಂದ ನಾಗಪ್ಪ ದುರ್ಗೇಕರ, ಇವರು ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next