Advertisement

ಹಳ್ಯಾಳದಲ್ಲಿ ವಿಶ್ವಕರ್ಮ ಮಹಿಳಾ ಸಂಘ ಉದ್ಘಾಟನೆ

02:23 PM Jan 28, 2021 | Team Udayavani |

ಹುಬ್ಬಳ್ಳಿ: ಹಳ್ಯಾಳ ಗ್ರಾಮದಲ್ಲಿ ಶ್ರೀ ವಿಶ್ವಕರ್ಮ ಮಹಿಳಾ ಸಂಘದ ಉದ್ಘಾಟನಾ ಸಮಾರಂಭ ನಡೆಯಿತು.

Advertisement

ಅಖೀಲ ಭಾರತೀಯ ವಿಶ್ವಕರ್ಮ ಛಾತ್ರಾ ಯುವ ಸಂಘ ದೆಹಲಿಯ ರಾಷ್ಟ್ರೀಯ ಅಧ್ಯಕ್ಷ ಸಂತೋಷ ಬಡಿಗೇರ ಸಂಘದ ಉದ್ಘಾಟನೆ ಮಾಡಿ ಮಾತನಾಡಿ, ಸಂಘಟನೆಯ ಮೂಲಕ ಹೆಚ್ಚು ಹೆಚ್ಚು ರಚನಾತ್ಮಕ ಕಾರ್ಯಗಳನ್ನು ಹಮ್ಮಿಕೊಳ್ಳುವಂತೆ ಸೂಚಿಸಿದರು.

ಸಮಗ್ರ ಕರ್ನಾಟಕ ಶ್ರೀ ವಿಶ್ವಕರ್ಮ ಸಮಾಜದ ರಾಜ್ಯಾಧ್ಯಕ್ಷೆ ಸುವರ್ಣ ಪತ್ತಾರ ಅಧ್ಯಕ್ಷತೆ ವಹಿಸಿದ್ದರು. ಹಳ್ಯಾಳ ಗ್ರಾಪಂಗೆ ಆಯ್ಕೆಯಾದ ಸದಸ್ಯರಾದ ನಾಗನಗೌಡ ರಾಮನಗೌಡ, ಸುಭಾಸಗೌಡಪಾಟೀಲ, ಮಂಜುನಾಥ ನಾಗನಗೌಡ್ರ,  ಬಸವರಾಜ ಹಸರಡ್ಡಿ, ಗುರುಪಾದಗೌಡ ಹನಮಂತಗೌಡ, ಫಕೀರಮ್ಮ ಮಲ್ಲಮ್ಮನವರ, ಕಮಲವ್ವ ಜವಳಗೇರಿ, ಅಕ್ಕಮ್ಮ ಹಳಿಯಾಳ, ಭಾಗ್ಯಲಕ್ಷ್ಮೀ ಕನಕಾಜನವರ, ದಿಲಶಾದಬೀ ಬಡೇಸಾಬನವರ ಅವರನ್ನು ಸನ್ಮಾನಿಸಲಾಯಿತು.

ಇದನ್ನೂ ಓದಿ:“ಸಂಸ್ಕೃತಿ ಮನೆ ಮನೆಗೆ ಪರಿಚಯವಾಗಲಿ”

ಮಹಿಳಾ ಸಂಘ ಹಳ್ಯಾಳ ಘಟಕದ ಅಧ್ಯಕ್ಷೆ ರತ್ನವ್ವ ಬಡಿಗೇರ, ಉಪಾಧ್ಯಕ್ಷೆ ಗಾಯಿತ್ರಿ ಬಡಿಗೇರ, ಹಿರಿಯರಾದ ರುದ್ರಪ್ಪ ಬಡಿಗೇರ, ಮಾನಪ್ಪ ಪತ್ತಾರ, ದ್ಯಾಮಣ್ಣಾ ಬಡಿಗೇರ, ಮಂಜುನಾಥ ಬಡಿಗೇರ ಇನ್ನಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next