Advertisement

ಗೋಕರ್ಣ ಪರ್ತಗಾಳಿ ಶ್ರೀಗಳಿಂದ ಶ್ರೀ ಲಕ್ಷ್ಮೀನಾರಾಯಣ ಕೃಪಾ ವಾಸ್ತು ಉದ್ಘಾಟನೆ

02:26 PM Nov 12, 2021 | Team Udayavani |

ಪಣಜಿ: ಎಲ್ಲ ಜನರು ಒಂದೆಡೆ ಸೇರಲು ಸಭಾಗೃಹದ ವಾಸ್ತು ಅತ್ಯಂತ ಮಹತ್ವದ್ದಾಗಿದೆ. ಯಾವುದೇ ಮಂಗಳ ಕಾರ್ಯವು ಕೂಡ ನಮ್ಮ ಕುಲದೇವರ ಆಶೀರ್ವಾದದಿಂದಲೇ ನಡೆಯಬೇಕು ಎಂಬುದು ಪ್ರತಿಯೊಬ್ಬರ ಇಚ್ಛೆಯಾಗಿರುತ್ತದೆ. ಇಂತಹ ಪವಿತ್ರ ವಾಸ್ತು ನಮ್ಮ ಭಾವನೆಯನ್ನು ಜಾಗೃತಗೊಳಿಸುತ್ತದೆ ಎಂದು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿ ನುಡಿದರು.

Advertisement

ಗೋವಾದ ಶಿರೋಡಾದ ಕಾಮಾಕ್ಷಿ ಸಂಸ್ಥಾನದ ಮಂದಿರದ ಪರಿಸರದಲ್ಲಿ ನಿರ್ಮಿಸಲಾಗಿರುವ ಸಭಾಗೃಹದಲ್ಲಿ ಶ್ರೀ ಲಕ್ಷ್ಮೀನಾರಾಯಣ ಕೃಪಾ ವಾಸ್ತು ಉದ್ಘಾಟನೆ ನೆರವೇರಿಸಿ ಅವರು ಆಶೀರ್ವಚನ ನೀಡಿದರು.

ಶೇಖರ ಗುಂಗಟ್ ಕಾರ್ಯಕ್ರಮ ನಿರೂಪಿಸಿದರು. ಶ್ರೀಕಾಂತ ಪೇಬಿರ್ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next