Advertisement

ಚಿತ್ರೋತ್ಸವ ಸಪ್ತಾಹಕ್ಕೆ ಚಾಲನೆ: ಅಮರಾವತಿ ಪ್ರದರ್ಶನ

12:15 PM Nov 25, 2017 | |

ಧಾರವಾಡ: ಜಿಲ್ಲಾಡಳಿತ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ನ.24ರಿಂದ 30ರವರೆಗೆ ನಗರದ ಶ್ರೀನಿವಾಸ ಚಿತ್ರಮಂದಿರದಲ್ಲಿ ಹಮ್ಮಿಕೊಂಡ ಚಿತ್ರೋತ್ಸವ ಸಪ್ತಾಹಕ್ಕೆ ಶುಕ್ರವಾರ ಚಾಲನೆ ದೊರೆಯಿತು. 

Advertisement

ಪ್ತಾಹದ ಮೊದಲ ದಿನವಾದ ಶುಕ್ರವಾರ  ನಿರ್ದೇಶಕ ಗಿರಿರಾಜ್‌ ಎಂ. ನಿರ್ದೇಶನದ  ಅಮರಾವತಿ ಚಿತ್ರ ಪ್ರದರ್ಶಿಸಲಾಯಿತು. ಚಿತ್ರ ವೀಕ್ಷಣೆಗೆ ಅಪಾರ ಜನಸ್ತೋಮ ಆಗಮಿಸಿತ್ತು.

ಮುಖ್ಯ ಭೂಮಿಕೆಯಲ್ಲಿ ಅಚ್ಯುತ್‌ಕುಮಾರ್‌, ಹೇಮತ್‌ ಸುಶೀಲ್‌, ವೈಶಾಲಿ ದೀಪಕ್‌, ನೀನಾಸಂ ಅಶ್ವತ್‌ ನಟಿಸಿರುವ ಚಿತ್ರ ರಾಜ್ಯ ಪ್ರಶಸ್ತಿಯನ್ನು ಪಡೆದಿದೆ. ಸಪ್ತಾಹ ಎರಡನೇ ದಿನವಾದ ನ.25ರಂದು ಬೆಳಗ್ಗೆ 10 ಗಂಟೆಗೆ “ಕಿರಿಕ್‌ ಪಾರ್ಟಿ’ ಚಿತ್ರ ಪ್ರದರ್ಶನಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next