Advertisement

Wayanad ಭೂಕುಸಿತದಲ್ಲಿ ಕೆ.ಆರ್‌. ಪೇಟೆ ಮಹಿಳೆ ಗಂಭೀರ

11:58 PM Jul 30, 2024 | Team Udayavani |

ಮಂಡ್ಯ: ಕೇರಳದ ವಯನಾಡಿನಲ್ಲಿ ಮಂಗಳವಾರ ಸಂಭವಿಸಿದ ಭೂ ಕುಸಿತದಲ್ಲಿ ಕೆ.ಆರ್‌. ಪೇಟೆ ತಾಲೂಕಿನ ಕಸಬಾ ಹೋಬಳಿಯ ಕತ್ತರಘಟ್ಟ ಗ್ರಾಮದ ಝಾನ್ಸಿ ರಾಣಿ, ಈಕೆಯ ಪತಿ ಅನಿಲ್‌ ಕುಮಾರ್‌ ಹಾಗೂ ಮಾವ ದೇವರಾಜು ಎಂಬುವರು ಸಿಲುಕಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.

Advertisement

ಝಾನ್ಸಿರಾಣಿ ಅವರ ಮಗ ನಿಹಾಲ್‌ (2) ಹಾಗೂ ಅತ್ತೆ ಲೀಲಾವತಿ (55) ಕಣ್ಮರೆಯಾಗಿದ್ದು, ಇದುವರೆಗೂ ಪತ್ತೆಯಾಗಿಲ್ಲ.

ಕತ್ತರಘಟ್ಟ ಗ್ರಾಮದ ಜಗದೀಶ್‌ ಮತ್ತು ಕುಳ್ಳಮ್ಮ ಅವರ ಪುತ್ರಿ ಝಾನ್ಸಿರಾಣಿ ಅವರನ್ನು ಮೂಲತಃ ನಂಜನಗೂಡು ತಾಲೂಕಿನ ಸರಗೂರು ಗ್ರಾಮದ, ಪ್ರಸ್ತುತ ಕೇರಳದ ಮುಂಡಕೈ ಗ್ರಾಮದಲ್ಲಿ ನೆಲೆಸಿರುವ ಅನಿಲ್‌ ಕುಮಾರ್‌ ಜತೆ 2020ರಲ್ಲಿ ವಿವಾಹ ಮಾಡಿಕೊಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next