Advertisement

ನಾಲ್ಕುಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅವಿರೋಧ ಆಯ್ಕೆ

04:57 PM Nov 04, 2019 | Suhan S |

ಕನಕಪುರ: ನಗರಸಭೆ ಚುನಾವಣೆಗೆ ಜೆಡಿಎಸ್‌13, ಕಾಂಗ್ರೆಸ್‌ 31, ಬಿಜೆಪಿ 27ಯಿಂದ ಹಾಗೂ 19 ಜನ ಪಕ್ಷೇತರರು ನಾಮ ಪತ್ರ ಸಲ್ಲಿಸಿದ್ದು, ಕೋಟೆಯ ವಾರ್ಡ್‌ ನಂ 3 ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮ ಪತ್ರ ಸಲ್ಲಿಸಿದ್ದ ಆನಂದ್‌ ಮತ್ತು 27ನೇ ವಾರ್ಡಿನ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಕೃಷ್ಣಯ್ಯಶೆಟ್ಟಿ ಅವರ ನಾಮ ಪತ್ರಗಳಲ್ಲಿ ದೋಷಗಳು ಇರುವುದರಿಂದ 2 ನಾಮಪತ್ರಗಳು ತಿರಸ್ಕೃತಗೊಂಡಿವೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಅವಿರೋಧ ಆಯ್ಕೆ: ಮಳಗಾಳಿನ ವಾರ್ಡ್‌ ನಂ. 2ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಎಂ. ಕಾಂತರಾಜು, ಮೇಗಳ ಬೀದಿಯ 23ನೇ ವಾರ್ಡಿನ ಕಾಂಗ್ರೆಸ್‌ ಅಭ್ಯರ್ಥಿ ಪುಟ್ಟಲಕ್ಷ್ಮಮ್ಮ, ಭುವನೇಶ್ವರಿ ಬಡಾವಣೆಯ 29ನೇ ವಾರ್ಡಿನ ಕಾಂಗ್ರೆಸ್‌ ಅಭ್ಯರ್ಥಿ ಪದ್ಮಮ್ಮ, ನೀಲಕಂಠಶ್ವರ ಶಾಲೆಯ 27ನೇ ವಾರ್ಡಿನ ಕಾಂಗ್ರೆಸ್‌ ಅಭ್ಯರ್ಥಿ ಎನ್‌.ಮೋಹನ್‌ ಸೇರಿದಂತೆ ಈ 4 ವಾಡ್‌ ಗಳಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳಿಗೆ ಪ್ರತಿ ಸ್ಪರ್ಧಿಗಳು ಸ್ಪರ್ಧಿಸದ ಹಿನ್ನೆಲೆಯಲ್ಲಿ ಈ 4 ವಾರ್ಡಿನ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

ಈ ನಡುವೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ಮೈತ್ರಿ ಮಾಡಿಕೊಳ್ಳುವ ಹಂತದಲ್ಲಿದ್ದು, ಜೆಡಿಎಸ್‌ 8 ರಿಂದ 9 ಸ್ಥಾನಗಳಿಗೆ ಬೇಡಿಕೆ ಇಟ್ಟಿದೆ ಎಂದು ತಿಳಿದು ಬಂದಿದೆ. ಇಂದು ಅಥವಾ ನಾಳೆ ಮೈತ್ರಿಯಿಂದ ಕಾಂಗ್ರೆಸ್‌ ಮತ್ತು ಜೆಡಿಎಸ್‌ಗೆ ಎಷ್ಟು ಸ್ಥಾನಗಳು ಸಿಗಲಿವೆ ಎಂದು ತಿಳಿಯಲಿದೆ. ನಗರಸಭೆಯ 31 ವಾರ್ಡ್‌ಗಳಲ್ಲಿ ಚುನಾವಣೆಗೂ ಮುನ್ನವೇ 4 ವಾರ್ಡ್‌ಗಳು ಕಾಂಗ್ರೆಸ್‌ ಪಕ್ಷದ ಪಾಲಾಗಿದ್ದು, ಉಳಿದ 27 ವಾರ್ಡ್‌ಗಳಲ್ಲಿ ಯಾವ ಪಕ್ಷ ಮೇಲುಗೈ ಸಾಧಿಸಲಿದೆ. ಯಾವ ಪಕ್ಷ ನಗರಸಭೆಯ ಅಧಿಕಾರ ಹಿಡಿಯಲಿದೆ ಎಂದು ಕಾದು ನೋಡಬೇಕಿದೆ. ಅವಿರೋಧವಾಗಿ ಆಯ್ಕೆಯಾದ 29 ವಾರ್ಡಿನ ಪದ್ಮಮ್ಮ ಮತ್ತು 27ನೇ ವಾರ್ಡಿನ ಎನ್‌. ಮೋಹನ್‌ ಅವರಿಗೆ ಮೇಗಳ ಬೀದಿಯ ಜಯಂತ ಶೆಟ್ಟಿ ,ಮಂಜು, ಕಿರಣ್‌, ಕಾಂಗ್ರೆಸ್‌ ಕಾರ್ಯಕರ್ತರು ಹಾರಹಾಕಿ ಅಭಿನಂದನೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next